HEALTH TIPS

ಭಾರತ-ಪಾಕ್‌ ಸಂಘರ್ಷದಿಂದ ಆರ್ಥಿಕತೆಗೆ ಪೆಟ್ಟುಬಿದ್ದಿಲ್ಲ: ಆರ್‌ಬಿಐ ಗವರ್ನರ್‌

ಮುಂಬೈ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ದೇಶದ ಆರ್ಥಿಕತೆಗೆ ಯಾವುದೇ ಪೆಟ್ಟುಬಿದ್ದಿಲ್ಲ ಎಂದು ಶುಕ್ರವಾರ ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. 

ಈ ಸಂಘರ್ಷವು ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನಷ್ಟೇ ಉಂಟುಮಾಡಿದೆ.

ಉತ್ತರ ಭಾರತದ ಹಲವೆಡೆ ವಿಮಾನಯಾನ ಕುಂಟಿತಗೊಂಡಿದ್ದರಿಂದ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು, ಆದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದರು.

ಸಂಘರ್ಷದ ತೀವ್ರತೆಯಿದ್ದ ಕೆಲವು ದಿನಗಳ ಕಾಲ ಆ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿತ್ತಾದರೂ, ಇದೀಗ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ -19 ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್, 'ಕೋವಿಡ್‌ ಇದೀಗ ಕೇವಲ ಒಂದು ವೈರಾಣುವಷ್ಟೇ. ಅದು ಹಾಗೆ ಇರುತ್ತದೆ ಎಂದು ಆಶಿಸುತ್ತೇನೆ' ಎಂದರು.

ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು 'ಅಪರೇಷನ್ ಸಿಂಧೂರ'ಮೂಲಕ ಪಾಕಿಸ್ತಾನದಲ್ಲಿದ್ದ ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries