ಉಪ್ಪಳ: ಉಪ್ಪಳ ಐಲ ಮೈದಾನ ಸನಿಹದ ನಿವಾಸಿ, ದಿ. ಶ್ರೀಧರ ಅಂಬಾರ್ ಅವರ ಪುತ್ರ ಆರೆಸ್ಸೆಸ್ನ ಹಿರಿಯ ಮುಖಂಡ ಅಶೋಕ್ ಅಂಬಾರ್(57)ಹೃದಯಾಘಾತದಿಂದ ಸೋಮವಾರ ನಿಧನರದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಇವರನ್ನು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಸಾವು ಸಂಭವಿಸಿದೆ. ಮಂಗಳೂರಿನಲ್ಲಿ ಪ್ಲಂಬಿಂಗ್ ಗುತ್ತಿಗೆದಾರರಾಗಿದ್ದರು. ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಸಮಿತಿ ಟ್ರಸ್ಟಿ, ಚೆರುಗೋಳಿ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಪ್ರಧಾನ ಕಾರ್ಯದರ್ಶಿ, ಐಲಮೈದಾನ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಸೇರಿದಂತೆ ನಾನಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


