HEALTH TIPS

ಕಮ್ಯೂನಿಸ್ಟ್ ಮುಖಂಡ ಪಿ. ರಾಘವನ್ ಸ್ಮಾರಕ ಟ್ರಸ್ಟ್ ಪ್ರಶಸ್ತಿಗೆ ಅಯ್ಕೆ

ಕಾಸರಗೋಡು: ಪ್ರಮುಖ ಕಮ್ಯುನಿಸ್ಟ್-ಟ್ರೇಡ್ ಯೂನಿಯನ್ ಮುಖಂಡ, ಉದುಮ ಮಾಜಿ ಶಾಸಕ ಪಿ. ರಾಘವನ್ ಅವರ ಸ್ಮರಣಾರ್ಥ ಪಿ. ರಾಘವನ್ ಸ್ಮಾರಕ ಟ್ರಸ್ಟ್ ಸ್ಥಾಪಿಸಿರುವ ಮೊದಲ ಪ್ರಶಸ್ತಿಗೆ ಕೆ.ಎನ್. ರವೀಂದ್ರನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. 

ವ್ಯಾಪಾರಒಕ್ಕೂಟ ಕ್ಷೇತ್ರ, ಕಮ್ಯುನಿಸ್ಟ್ ಚಳುವಳಿ ಮತ್ತು ಸಾರ್ವಜನಿಕ ರಂಗಕ್ಕೆ ರವೀಂದ್ರನಾಥ್ ನೀಡಿದ ಗಣನೀಯ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎ. ಮಾಧವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾaರೆ.

50ಸಾವಿರ ರೂ. ನಗದು, ಪ್ರಶಸ್ತಿಫಲಕ ಹೊಂದಿರುವ ಪಿ. ರಾಘವನ್ ಸ್ಮಾರಕ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಜೂನ್ 14 ರಂದು ಮಧ್ಯಾಹ್ನ 3ಕ್ಕೆ ಎರ್ನಾಕುಲಂನಲ್ಲಿರುವ ರವೀಂದ್ರನಾಥ್ ಅವರ ನಿವಾಸದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ರವೀಂದ್ರನಾಥ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು.  ಸಿಪಿಐ(ಎಂ) ಮತ್ತು ಸಿಐಟಿಯುನ ಪ್ರಮುಖ ನಾಯಕರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.14 ರಂದು ಮಧ್ಯಾಹ್ನ 3 ಗಂಟೆಗೆ ಸಮಾರಂಭ ನಡೆಯಲಿದೆ. 

ಪಿ. ರಾಘವನ್ ಅವರು ಸಾರ್ವಜನಿಕ ಕಾರ್ಯಕರ್ತ, ಕಮ್ಯುನಿಸ್ಟ್ ನಾಯಕ ಮತ್ತು ಜನಪ್ರತಿನಿಧಿಯಾಗಿದ್ದು, ಕೇರಳದಲ್ಲಿ ಕಾರ್ಮಿಕ ಸಂಘ ಮತ್ತು ಸಹಕಾರಿ ಕ್ಷೇತ್ರಗಳಿಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ವಕೀಲ ಪಿ. ರಾಘವನ್, ಎ. ಗೋಪಾಲನ್ ನಾಯರ್, ಡಾ. ಸಿ. ಬಾಲನ್, ಟಿ.ಕೆ.ರಾಜನ್, ಸನ್ನಿ ಜೋಸೆಫ್, ಕೆ.ಆರ್. ಅಜಿತ್‍ಕುಮಾರ್ ಮತ್ತು ಕೆ. ರವೀಂದ್ರನ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries