HEALTH TIPS

ಜನರಲ್ ಆಸ್ಪತ್ರೆ ಎದುರು ಧರಣಿ-ಬಿಜೆಪಿ ಕಾರ್ಯಕರ್ತರಿಗೆ ಕೇಸು

ಕಾಸರಗೋಡು: ಆರೋಗ್ಯ ಇಲಾಖೆ ಶೋಚನೀಯಾವಸ್ಥೆ ಬಗೆಹರಿಸುವಂತೆ ಹಾಗೂ ಸಚಿವೆ ವೀಣಾ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಎದುರು ಧರಣಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 85ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾರ್ಯಕರ್ತರು ಒಟ್ಟಾಗಿ ಆಗಮಿಸಿ ರಸ್ತೆ ತಡೆ ನಡೆಸಿರುವುದಲ್ಲದೆ, ಸಾರಿಗೆ ಅಡಚಣೆ, ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿರುವ ಬಗ್ಗೆ ಈ ಕೇಸು ದಾಖಲಾಗಿದೆ. ಪಿ.ಆರ್ ಸುನಿಲ್, ಲೋಕೇಶ್ ನೋಂಡ, ಸಜೀವನ್, ಗುರುಪ್ರಸಾದ್, ಮನುಲಾಲ್ ಮೇಲತ್ತ್, ಸಾಗರ್ ಚಾತಮತ್ತ್, ಪ್ರಮಿಳಾ ಮಜಲ್, ಸತೀಶ್ಚಂದ್ರ ಭಂಡಾರಿ, ರಮೇಶ್ ಪಿ, ರವೀಂದ್ರನ್, ಪ್ರದೀಪ್ ಕುಟ್ಟಕಣಿ, ಶ್ರೀಧರ್ ಸೇರಿದಂತೆ ಹಲವರ ವಿರುದ್ಧ ಈ ಕೇಸು ದಾಖಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries