ಕಾಸರಗೋಡು: ತೀಯಾ ಮಹಾಸಭಾ ಕಾಸರಗೋಡು ಜಿಲ್ಲಾ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 27 ರಂದು ವಿದ್ಯಾನಗರ ಸನಿಹದ ಉದಯಗಿರಿ ಶ್ರೀಹರಿ ಸಭಾಂಗಣದಲ್ಲಿ ಜರುಗಲಿದ್ದು, ಪ್ರಸಿದ್ದ ಬರಹಗಾರ, ಹಿರಿಯ ಸಾಮಾಜಿಕ ಮುಂದಾಳು, ಪದ್ಮಶ್ರೀ ಬಾಲನ್ ಪೂತೇರಿ, ಮಲಪ್ಪುರಂ ಸಮಾರಂಭ ಉದ್ಘಾಟಿಸುವರು ಎಂದು ತೀಯಾ ಸಮಾಜದ ರಾಜ್ಯಾಧ್ಯಕ್ಷ ಗಣೇಶ ಅರಮಂಗಾನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತೀಯಾ ಸಮುದಾಯದ ಪರಂಪರೆ, ಆಚಾರಾನುಷ್ಠಾನಗಳ ಸಂರಕ್ಷಣೆಯ ಜತೆಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಮುದಾಯದ ಪ್ರಗತಿಗೆ ದಾರಿ ಹಾಗೂ ಮೀಸಲಾತಿ ಸೇರಿದಂತೆ ಹಕ್ಕುಗಳನ್ನು ಪಡೆದುಕೊಳ್ಳುವುದು, 2026ರಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ತೀಯಾ ಸಮಾಜದವರನ್ನು ಪ್ರತ್ಯೇಕ ಸಮುದಾಯವಾಗಿ ದಾಖಲಿಸುವ ಗುರಿಯೊಂದಿಗೆ ಸಮ್ಮೇಳನ ಆಯೋಜಿಸಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಪಿ. ಸಿ. ವಿಶ್ವಂಭರನ್ ಪಣಿಕ್ಕರ್ ಅಧ್ಯಕ್ಷತೆ ವಹಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಎನ್ ಸತೀಶ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ಗಣೇಶ್ ಅರಮಂಗಾನಂ ಮುಖ್ಯ ಭಾಷಣ ಮಾಡುವರು. ಉತ್ತರ ಮಲಬಾರ್ ತೀಯಾ ಸಮುದಾಯ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ. ರಾಜನ್ ಪೆರಿಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಹಿರಿಯ ಹೃದ್ರೋಗ ತಜ್ಞ ಡಾ. ಕೆ. ಮುಕುಂದ ಕುಂಬಳೆ ಅವರಿಗೆ 'ಆದಿ ದಿವ್ಯನ್ 'ಪುರಸ್ಕಾರ ನೀಡಿ ಗೌರವಿಸಲಾಗುವುದು.
ಜತೆಗೆ 66 ವರ್ಷಗಳಿಂದ ಆಚಾರಸ್ಥಾನಿಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೃಷ್ಣನ್ ಕಾರಣವರ್, ರಾಮ ಗುರುಸ್ವಾಮಿ, ಉದಯಗಿರಿ, ಡಾ. ಬಿಜಿನಾ ಭಾಸ್ಕರನ್, ಡಾ. ಶೋಭಾ ಪಾರಕಟ್ಟೆ, ಡಾ. ಅಕ್ಷಯ್ ಪ್ರಭಾಕರನ್, ಪನ್ನಿಪ್ಪಾರೆ, ಬಿಂದು ಕೆ, ಟಿ. ವಿ. ಶೀಬ ಅವವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿ. ಸಿ. ವಿಶ್ವಂಭರನ್ ಪಣಿಕ್ಕರ್, ಸತೀಶನ್ ಮನ್ನಿಪ್ಪಾಡಿ, ಗಣೇಶ್ ಮಾವಿನಕಟ್ಟೆ, ಕೆ. ವಿ. ಪ್ರಸಾದ್ ಹಾಗೂ ಟಿ. ವಿ. ರಾಘವನ್ ಉಪಸ್ಥಿತರಿದ್ದರು.




