ಬದಿಯಡ್ಕ: ನೆಕ್ರಾಜೆಯ ಕೊಠಡಿಯೊಂದರಲ್ಲಿ ದಾಸ್ತಾನಿರಿಸಿದ್ದ 269ತೆಂಗಿನ ಕಾಯಿ ಕಳವುಗೈದಿರುವ ಬಗ್ಗೆ ನೆಕ್ರಾಜೆ ಪುಂಡೂರು ನಿವಾಸಿ ರಾಮನ್ ಹಾಗೂ ಅರ್ಲಡ್ಕ ನಿವಾಸಿ ರವಿ ಎಂಬವರನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್ಲಡ್ಕ ಆಲಂಕೋಲ್ ನಿವಾಸಿ ಕುದಿರತ್ತಾಯರ್ ಎಂಬವರ ಮಾಲಿಕತ್ವದ ಕೊಠಡಿಯಿಂದ ಶುಕ್ರವಾರ ಹಾಡಹಗಲು ಈ ಕಳವು ನಡೆಸಲಾಗಿತ್ತು.
ಆಂಕೋಲ್ ನಿವಾಸಿ ನಾರಾಯಣನ್ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಕಾಞಂಗಾಡು ತೀರ್ಥಂಕರ ಎಂಬಲ್ಲಿ ಇತ್ತೀಚೆಗೆ ಕೊಠಡಿಯಲ್ಲಿ ದಾಸ್ತಾನಿರಿಸಿದ್ದ 200ತೆಂಗಿನ ಕಾಯಿ ಕಳವುಗೈದಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎನ್. ಪ್ರಶಾಂತ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ತೆಂಗಿನಕಾಯಿ ಧಾರಣೆ ಗಗನಕ್ಕೇರುತ್ತಿರುವ ಮಧ್ಯೆ ಅಲ್ಲಲ್ಲಿ ತೆಂಗಿನಕಾಯಿ ಕಳವು ಪ್ರಕರಣಗಳೂ ಹೆಚ್ಚುವಂತಾಗಿದೆ.



