ಮಂಜೇಶ್ವರ: ಗುವೇದಪಡ್ಪು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ಎಸ್ಸೆಲ್ಸಿ, ಪಿಯುಸಿ ಹಾಗೂ ಡಿಗ್ರಿ ತರಗತಿಗಳಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭವನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಮೀನಾಕ್ಷಿ ಬೊಡ್ಡೋಡಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಪುಸ್ತಕಗಳ ಓದುವಿಕೆಯಿಂದ ಜೀವನದ ಮೌಲ್ಯಗಳು ಹೆಚ್ಚಾಗುತ್ತವೆ ಮತ್ತು ಅದರಿಂದ ಸಂಸ್ಕಾರಯುತ ಜೀವನ ನಡೆಸಲು ಪ್ರೇರಣೆಯನ್ನು ನೀಡುತ್ತದೆ. ಆದ್ದರಿಂದ ಓದಿ ಬೆಳೆಯಿರಿ ಎಂಬ ಹಿತನುಡಿಯನ್ನು ತಿಳಿಸಿದರು.
ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೋಪಾಲ ಮಾಸ್ತರ್ ಆನೇಕಲ್ಲು, ಅಭಿಷೇಕ್ ಗುವೇದಪಡ್ಪು, ಕಿಶೋರ್ ಮಾಸ್ತರ್ ಆನೇಕಲ್ಲು, ಚೈತ್ರ ಟೀಚರ್ ಬಗಂಬಿಲ, ರುಬೀನಾ ಟೀಚರ್ ಗುವೇದಪಡ್ಪು, ಚಂದ್ರಹಾಸ ಕತ್ತೆರಿಕೋಡಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಮಡ ನಿಶಿತಾ, ಕುಮಾರಿ ಸುಚಿತ, ತೌಸಿನ ಮತ್ತು ನಿಸಾರ್ ಹಾಗೂ ಪಿಯುಸಿಯಲ್ಲಿ ತೇರ್ಗಡೆಗೊಂಡ ಸಿಂಚನ, ಸುಶ್ಮಿತ್,ಲಾವಣ್ಯ, ಧನುಶ್ರೀ, ಚಿಂತನ್ ಶೆಟ್ಟಿ ಹಾಗೂ ಎಂ.ಎ.ಪದವಿಯಲ್ಲಿ ತೇರ್ಗಡೆಗೊಂಡ ತನುಜಾಶ್ರೀ ಗುವೇದಪಡ್ಪು ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಾವಣ್ಯ, ಸಿಂಚನ ಹಾಗೂ ತನುಜಾಶ್ರೀ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ಜಯಶ್ರೀ ವಂದಿಸಿದರು.



