HEALTH TIPS

ವರ್ಕಾಡಿ ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘದ ಮಹಾಸಭೆ-ನೂತನ ಸಮಿತಿ ರಚನೆ

ಮಂಜೇಶ್ವರ : ವರ್ಕಾಡಿಯ ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘದ ಮಹಾಸಭೆಯು ವರ್ಕಾಡಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಪಾವಳ ವಹಿಸಿದ್ದರು. ಗೌರವಾಧ್ಯಕ್ಷರಾದ ಬಂಟಪ್ಪ ಪೂಜಾರಿ ಕಳಿಯೂರು, ರವೀಂದ್ರ ಪೂಜಾರಿ ಕಳಿಯೂರು, ಜನಾರ್ಧನ ಪೂಜಾರಿ ಕಳಿಯೂರು ಉಪಸ್ಥಿತರಿದ್ದರು.

ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಭುಜಂಗ ಪೂಜಾರಿ ಕಡಂಬಾರ್, ಕಾರ್ಯದರ್ಶಿಯಾಗಿ ಪೂರ್ಣಿಮ ಬೇರಿಂಜ, ಕೋಶಾಧಿಕಾರಿಯಾಗಿ ನವೀನ್ ಪೂಜಾರಿ ಮಡ್ವ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಕಳಿಯೂರು, ಉಪಾಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಪಾವೂರು ಪೆÇಯ್ಯೆ, ಜತೆ ಕಾರ್ಯದರ್ಶಿಯಾಗಿ ಪ್ರಮೀಳ ರಘುನಾಥ ಪೂಜಾರಿ ವರ್ಕಾಡಿ, ಸಂಚಾಲಕರಾಗಿ ದಾಮೋದರ ಪೂಜಾರಿ ತಚ್ಚಿರೆ ಮತ್ತು ನವೀನ್ ಪೂಜಾರಿ ಪಾವಳ, ಭಜನಾ ಸಂಚಾಲಕರಾಗಿ ಜಗದೀಶ್ ಪೂಜಾರಿ ತಾಮಾರ್ ಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವೀಂದ್ರ ಪೂಜಾರಿ ಕಳಿಯೂರು, ಜನಾರ್ಧನ ಪೂಜಾರಿ ಕಳಿಯೂರು, ಚಂದ್ರಹಾಸ ಪೂಜಾರಿ ಕಡಂಬಾರ್, ತಿಲಕ್ ಪ್ರಸಾದ್ ಅಡೆಕಳಕಟ್ಟೆ, ಪ್ರಭಾಕರ ಪೂಜಾರಿ ಪಾವಳ, ಅಶೋಕ್ ಕುಮಾರ್ ತಚ್ಚಿರೆ, ಹೇಮಲತ ಕಳಿಯೂರು, ಜಯಪ್ರಶಾಂತ್ ಪಾಲೆಂಗ್ರಿ ಆಯ್ಜೆಯಾದರು.

ಸದಸ್ಯರಾದ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕೋಶಾಧಿಕಾರಿ ನವೀನ್ ಪೂಜಾರಿ ಮಡ್ವ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries