HEALTH TIPS

ಪಾಲ್ಘರ್‌ | ದೋಣಿಗೆ ಸರಕು ಸಾಗಣೆ ಹಡಗು ಡಿಕ್ಕಿ; 15 ನಾವಿಕರ ರಕ್ಷಣೆ

ಪಾಲ್ಘರ್‌: ಮಹಾರಾಷ್ಟ್ರದ ಪಾಲ್ಘರ್‌ ಕರಾವಳಿ ಪ್ರದೇಶದಲ್ಲಿ ಆಗಸ್ಟ್ 14ರ ರಾತ್ರಿ ಮೀನುಗಾರಿಕಾ ದೋಣಿಗೆ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿದೆ.

ಕರಾವಳಿ ತೀರದಿಂದ ಮೂರು ನಾಟಿಕಲ್‌ ಮೈಲಿ ದೂರದಲ್ಲಿ ಈ ಅವಘಡ ಸಂಭವಿಸಿದೆ. 'ಶ್ರೀ ಸಾಯಿ' ದೋಣಿಯಲ್ಲಿದ್ದ ನಾಲ್ವರು ನಾವಿಕರು ಸಮುದ್ರಕ್ಕೆ ಬಿದ್ದಿದ್ದು, ಈಜುತ್ತಾ ದಡ ಸೇರಿದ್ದಾರೆ.

'ಜೈ ಸಾಯಿ ಪ್ರಿಯ' ಹಾಗೂ 'ಜೈ ಸಾಯಿ ರಾಮ್‌' ದೋಣಿಗಳು ಸರಿಯಾದ ಸಮಯಕ್ಕೆ ಸಹಾಯಕ್ಕೆ ಧಾವಿಸಿದ್ದರಿಂದ 15 ನಾವಿಕರ ಜೀವಗಳು ಉಳಿದಿದ್ದು, ಸಂಭವನೀಯ ಅನಾಹುತ ತಪ್ಪಿದೆ.

ಸಮುದ್ರದಲ್ಲಿ ಶುಕ್ರವಾರ ಸುಮಾರು 17 ಗಂಟೆಗಳ ಕಾರ್ಯಾಚರಣೆ ಬಳಿಕ ಅಪಘಾತಕ್ಕೀಡಾದ ದೋಣಿಯನ್ನು ದಡಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries