ತಿರುವನಂತಪುರಂ: ಪ್ರವಾಸೋದ್ಯಮ ಇಲಾಖೆ ಆಯೋಜಿಸುವ ಈ ವರ್ಷದ ರಾಜ್ಯಮಟ್ಟದ ಓಣಂ ವಾರ ಆಚರಣೆ ಸೆಪ್ಟೆಂಬರ್ 3 ರಿಂದ 9 ರವರೆಗೆ ನಡೆಯಲಿದೆ.
ಸೆಪ್ಟೆಂಬರ್ 9 ರಂದು ನಡೆಯಲಿರುವ ವರ್ಣರಂಜಿತ ಮೆರವಣಿಗೆಗೆ ಮಾನವಿಯಂ ವೀಥಿಯಲ್ಲಿ Àಂಜೆ 5 ಗಂಟೆಗೆ ಚಾಲನೆ ನೀಡಲಾಗುವುದು. ಮೆರವಣಿಗೆ ದಕ್ಷಿಣ ಕೋಟೆಯಲ್ಲಿ ಕೊನೆಗೊಳ್ಳಲಿದೆ.
ಓಣಂ ಆಚರಣೆಯ ಭಾಗವಾಗಿ, ತಿರುವನಂತಪುರಂ ನಗರದ ಕವಡಿಯಾರ್ ನಿಂದ ಮಣಕ್ಕಾಡ್ ವರೆಗಿನ ಪ್ರದೇಶವನ್ನು ಉತ್ಸವ ವಲಯವೆಂದು ಘೋಷಿಸಲಾಗುವುದು ಮತ್ತು ಈ ಪ್ರದೇಶವನ್ನು ದೀಪಗಳಿಂದ ಅಲಂಕರಿಸಲಾಗುವುದು.
ಮೆರವಣಿಗೆ ಸಮಿತಿಯು ಮೆರವಣಿಗೆ ಹಾದುಹೋಗುವ ನಗರದ ಬೀದಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಸಂಹಿತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಮೆರವಣಿಗೆ ಸಮಿತಿಯ ಕಾರ್ಯಾಧ್ಯಕ್ಷ, ಸಾಮಾನ್ಯ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್ಕುಟ್ಟಿ ಭಾಗವಹಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಡಿ.ಕೆ. ಮುರಳಿ ಶಾಸಕರು ವಹಿಸಿದ್ದರು. ಹಸಿರು ಸಂಹಿತೆಯ ಭಾಗವಾಗಿ, ಮೆರವಣಿಗೆ ಹಾದುಹೋಗುವ ಮಾರ್ಗಗಳಲ್ಲಿ ಬಿನ್ಗಳು ಮತ್ತು ಕುಡಿಯುವ ನೀರಿನ ಕೌಂಟರ್ಗಳನ್ನು ಸ್ಥಾಪಿಸಲಾಗುವುದು. ಫೆÇ್ಲೀಟ್ಗಳ ಅವಶೇಷಗಳನ್ನು ತೆಗೆದುಹಾಕಲು ಸ್ಥಳೀಯ ಸರ್ಕಾರಿ ಇಲಾಖೆಯ ಅಡಿಯಲ್ಲಿ ಕ್ಲೀನ್ ಕೇರಳ ಕಂಪನಿಯನ್ನು ಬಳಸಿಕೊಳ್ಳಲಾಗುವುದು.
ಪ್ರದರ್ಶನ ವ್ಯಾಪ್ತಿ ಗರಿಷ್ಠ 20 ಅಡಿ ಉದ್ದ, 10 ಅಡಿ ಅಗಲ ಮತ್ತು 16 ಅಡಿ ಎತ್ತರವಿರಬೇಕು. ಪ್ರವಾಸೋದ್ಯಮ ನಿರ್ದೇಶಕಿ ಶಿಖಾ ಸುರೇಂದ್ರನ್ ಮಾತನಾಡಿ, ಫೆÇ್ಲೀಟ್ಗಳು ನವೀನವಾಗಿರಬೇಕು ಮತ್ತು ಪುನರಾವರ್ತಿತ ವಿಚಾರಗಳು ಮತ್ತು ವಿನ್ಯಾಸಗಳನ್ನು ತಪ್ಪಿಸಬೇಕು. ಪ್ರವಾಸೋದ್ಯಮ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಡಿ, ಪ್ರವಾಸೋದ್ಯಮ ಹೆಚ್ಚುವರಿ ನಿರ್ದೇಶಕಿ (ಜನರಲ್) ಶ್ರೀಧನ್ಯ ಸುರೇಶ್ ಮತ್ತು ವಿವಿಧ ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

