HEALTH TIPS

'ಕದನ ವಿರಾಮ ಘೋಷಿಸಿ': ಇಸ್ರೇಲ್‌ನಲ್ಲಿ ತೀವ್ರ ಪ್ರತಿಭಟನೆ

ಲಾಡ್‌: 'ಒಂದು ವರ್ಷದ ಹಿಂದೆಯೇ ನಾವು ಯುದ್ಧವನ್ನು ನಿಲ್ಲಿಸಬಹುದಿತ್ತು. ಒತ್ತೆಯಾಳುಗಳನ್ನು ವಾಪಸು ಕರೆಸಿಕೊಳ್ಳಬಹುದಿತ್ತು. ಆದರೆ, ನಮ್ಮ ಪ್ರಧಾನಿಯು ಮತ್ತೆ ಮತ್ತೆ ಯುದ್ಧವನ್ನು ಇಚ್ಛಿಸಿದರು. ತನ್ನದೇ ನಾಗರಿಕರ ಜೀವದಾನವನ್ನು ಬಯಸಿದರು. ತಮ್ಮ ಅಧಿಕಾರಕ್ಕಾಗಿ ಉಳಿಸಿಕೊಳ್ಳಲು ಇಷ್ಟೆಲ್ಲ ಮಾಡಿದರು...'

-ಹಮಾಸ್‌ ಬಂಡುಕೋರರ ಬಳಿ ಒತ್ತೆಯಾಳುಯಾಗಿರುವ 25 ವರ್ಷ ಮತನ್‌ ಎಂಬ ಯುವಕನ ತಂದೆಯ ಮಾತುಗಳಿವು. ಒತ್ತೆಯಾಳುಗಳನ್ನು ವಾಪಸು ಕರೆಸಿಕೊಳ್ಳಲು ಆಗ್ರಹಿಸಿ ಇಸ್ರೇಲ್‌ನಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇಸ್ರೇಲ್‌ನ ಒತ್ತೆಯಾಳುಗಳು ಮತ್ತು ಕಾಣೆಯಾದವರ ಕುಟುಂಬಗಳ ವೇದಿಕೆ ವತಿಯಿಂದ ಮಂಗಳವಾರವನ್ನು 'ಸಂಘರ್ಷದ ರಾಷ್ಟ್ರೀಯ ದಿನ'ವನ್ನಾಗಿ ಆಚರಿಸಿ, ತೀವ್ರ ಪ್ರತಿಭಟನೆ ನಡೆಸಲಾಯಿತು.

ಟೈರ್‌ ಸುಟ್ಟು, ಹೆದ್ದಾರಿಗಳ ತಡೆ ನಡೆಸಿ ಪ್ರತಿಭಟನಕಾರರು ತಮ್ಮ ಆಕ್ರೋಶ ವ್ಯಕ್ತ‍ಪಡಿಸಿದರು. 'ತಕ್ಷಣವೇ ಕದನವಿರಾಮ ಘೋಷಿಸಿ' ಎಂದು ಆಗ್ರಹಿಸಿದರು. ಆದರೆ, ಇನ್ನೊಂದೆಡೆ ಗಾಜಾದ ಮೇಲೆ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲು ಸರ್ಕಾರ ನಿರ್ಧರಿಸಿದೆ. 'ಯುದ್ಧದಿಂದಷ್ಟೇ ಹಮಾಸ್‌ ಅನ್ನು ತೊಡೆದು ಹಾಕಬಹುದು' ಎಂದು ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಹೇಳಿದರು.

ಗಾಜಾದ ನಾಸಿರ್‌ ಆಸ್ಪತ್ರೆ ಮೇಲಿನ ದಾಳಿ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ದಾಳಿಯಲ್ಲಿ ಪತ್ರಕರ್ತರೂ ಸೇರಿ 20 ಜನರು ಮೃತಪಪಟ್ಟಿದ್ದರು. ಈ ದಾಳಿಯ ಮಾರನೇ ದಿನವೇ ಇಸ್ರೇಲ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries