HEALTH TIPS

ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಜೇಶ್ವರ: ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ, ವೈದಿಕ ವಿಧಿವಿಧಾನಗಳಿಂದ ವಿಜೃಂಭಣೆಯಿಂದ ಜರುಗಿತು. ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು  ಶ್ರೀ ದೇವರ ಪ್ರಸಾದ ಹಾಗೂ ಭೋಜನ ಸ್ವೀಕರಿಸಿ ಕೃತಾರ್ಥರಾದರು. 

ಈ ಸಂಭ್ರಮದ ಸಮಾರಂಭದಲ್ಲಿ ಆಯೋಜನೆಗೊಂಡ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ  ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವು ವೈವಿದ್ಯಮಯವಾಗಿ ನಡೆಯಿತು. ಗುರುರಾಜ್ ಕಾಸರಗೋಡು ಅವರ ಆಯೋಜನೆ ಹಾಗೂ ನಿರೂಪಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಪ್ರತಿಮ ಕಲಾವಿದರಾದ ವರ್ಷಾ ಶೆಟ್ಟಿ, ಭುವಿ ಸಜಿಪ, ಹಂಶಿತ್ ಆಳ್ವ, ನವ್ಯಶ್ರೀ ಕೆ, ತೃಪ್ತಿ ಕೆ ಎಸ್, ಜಿಶಾನ್ವಿ, ಆರಾಧ್ಯ ಎಸ್ ಆಳ್ವ, ಹೃತಿಕ, ಆಧ್ಯಾ, ಆಹಾನ್ ಎಸ್ ಆಳ್ವ, ಇಶಾನ್ ಆರ್ ಶೆಟ್ಟಿ, ಮಾನ್ವಿ ಸಜಿಪ, ತಾನ್ಯ ಆರ್ ಶೆಟ್ಟಿ, ದ್ರುವಿ ಎಸ್ ಶೆಟ್ಟಿ, ರಾಧ್ಯಾ ಶೆಟ್ಟಿ, ಪ್ರಣಮ್ಯ, ತನ್ವಿತಾ, ಅಶ್ವಿತಾ, ದಿವ್ಯಶ್ರೀ, ಪವನ್ ಕುಮಾರ್, ಸ್ನೇಹಿಲ್ ಕುಮಾರ್, ಪಲ್ಲವಿ, ವಿಶಿಕಾ ಶೆಟ್ಟಿ ಮುಂತಾದವರು ಭಾಗವಹಿಸಿ ಅವರ್ಣನೀಯ ಪ್ರತಿಭಾ ಪ್ರದರ್ಶನ ನೀಡಿ ನೆರೆದಿರುವ ಸಹಸ್ರಾರು ಕಲಾಭಿಮಾನಿಗಳನ್ನು ರಂಜಿಸಿದರು. ಸಂಸ್ಥೆಯ ಯಶಸ್ವೀ ಕಾರ್ಯಕ್ರಮಗಳೊಂದಿಗೆ ಸೇರಿದ ಈ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಾದ ವಿಕ್ರಮದತ್ತ, ದೇವದಾಸ್, ಆನಂದ್ ಟಿ, ದಯಾನಂದ್, ರಘುನಾಥ್, ಸುರೇಂದ್ರ ಮತ್ತು ಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಪ್ರಸಾದ್ ಆಳ್ವ ಮುಂತಾದ ಗಣ್ಯರು ವೇದಿಕೆಯಲಿದ್ದು ಗುರುರಾಜ್ ಕಾಸರಗೋಡು ಅವರನ್ನು ಶಾಲು ಹೊದೆಸಿ ದೇವರ ಪ್ರಸಾದ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಗುರುತಿಸಿ ಪುರಸ್ಕರಿಸಲಾಯಿತು. ವಿಕ್ರಮದತ್ತ ಅವರು ಕಾರ್ಯಕ್ರಮದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ವಂದಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries