ಕಾಸರಗೋಡು: ಈ ಬಾರಿ ತಿರುವೋಣಂ, ಈದ್ಮಿಲಾದ್ ಹಾಗೂ ಅಧ್ಯಾಪಕರ ದಿನಾಚರಣೆ ಒಂದೇ ದಿನ ಆಚರಿಸಲಾಗುತ್ತಿದೆ. ಈ ಹಿಂದೆ ಈ ಮೂರೂ ದಿನಾಚರಣೆ ಬೇರೆ ಬೇರೆ ದಿನಗಳಲ್ಲಿ ನಡೆಯುತ್ತಿದ್ದರೆ, ಈ ವರ್ಷ ಒಂದೇ ದಿನ ಆಗಮಿಸುವ ಮೂಲಕ ಅಪೂರ್ವ ಸಮಾಗಮಕ್ಕೆ ಕಾರಣವಾಗಿದೆ. ಅಧ್ಯಾಪಕ ದಿನವನ್ನು ಪ್ರತಿ ವರ್ಷ ಸೆ. 5ರಂದೇ ಆಚರಿಸುತ್ತಿದ್ದರೂ, ಓಣಂ ಮತ್ತು ಈದ್ಮಿಲಾದ್ ವ್ಯತ್ಯಸ್ತ ದಿನಗಳಂದು ನಡೆಯುತ್ತಾ ಬಂದಿದೆ. ತಿರುವೋಣಂ ಹಾಗೂ ಈದ್ಮಿಲಾದ್ ಒಂದೇ ದಿನ ಆಗಮಿಸುತ್ತಿರುವುದು ಅಪೂರ್ವವಾಗಿದೆ. ಈ ಬಾರಿ ಓಣಂ ರಜೆಯಿರುವುದರಿಂದ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಗುತ್ತಿಲ್ಲ.




