HEALTH TIPS

ಹರಿದ್ವಾರ: ಭೂಕುಸಿತ, ರೈಲು ಸಂಚಾರ ಸ್ಥಗಿತ

ಹರಿದ್ವಾರ: ಇಲ್ಲಿನ ಹರ್‌ ಕಿ ಪೌರಿ ಬಳಿಯ ಮಾನಸಾದೇವಿ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದ್ದು, ಹರಿದ್ವಾರ-ಡೆಹ್ರಾಡೂನ್ ರೈಲು ಮಾರ್ಗಕ್ಕೆ ಹಾನಿಯಾಗಿದೆ.

ಮಾನಸಾದೇವಿ ಬೆಟ್ಟದಿಂದ ಬಂಡೆಗಳು ರೈಲು ಹಳಿಯ ಮೇಲೆ ಉರುಳಿಬಿದ್ದಿವೆ. ಇದರಿಂದಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇರಿದಂತೆ 12 ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ರೈಲು ಮಾರ್ಗದ ಸಮೀಪವಿದ್ದ ಶಿವ ದೇಗುಲಕ್ಕೂ ಹಾನಿಯಾಗಿದೆ' ಎಂದು ಹೇಳಿದ್ದಾರೆ.

ಈ ಭಾಗದಲ್ಲಿ ಕೆಲ ದಿನಗಳ ಹಿಂದೆಯೂ ಭೂಕುಸಿತ ಸಂಭವಿಸಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ರೈಲು ಹಳಿಗೆ ಹಾನಿಯಾಗುವುದನ್ನು ತಡೆಯುವ ಉದ್ದೇಶದಿಂದ ಬೆಟ್ಟ ಮತ್ತು ರೈಲು ಹಳಿಯ ಮಧ್ಯೆ ಕಬ್ಬಿಣದ ಬೃಹತ್‌ ಪರದೆಗಳನ್ನು ಅಳವಡಿಸಲಾಗಿತ್ತು. ಆದರೆ ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಕಬ್ಬಿಣದ ಪರದೆಯು ಮುರಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries