HEALTH TIPS

ಅಯ್ಯಪ್ಪ ಸಂಗಮ ನಡೆಸಲು ಸಜ್ಜು: ಸ್ವಾಗತ ಎಂದ ಎಸ್‌ಎನ್‌ಡಿಪಿ

 ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ಸಜ್ಜಾಗಿರುವುದನ್ನು ಎಸ್‌ಎನ್‌ಡಿಪಿ ಸ್ವಾಗತಿಸಿದೆ.

ಜಗತ್ತಿನಾದ್ಯಂತ ಇರುವ ಅಯ್ಯಪ್ಪನ ಭಕ್ತರು ರಾಜ್ಯಕ್ಕೆ ಭೇಟಿ ನೀಡಲು ಟಿಡಿಬಿಯ ಈ ಕಾರ್ಯಕ್ರಮವು ದಾರಿ ಮಾಡಿಕೊಡಲಿದೆ ಎಂದು ಈಳವ ಸಮುದಾಯದ ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್‌ಎನ್‌ಡಿಪಿ) ಯೋಗಂ ಭಾನುವಾರ ತಿಳಿಸಿದೆ.

ಅಯ್ಯಪ್ಪ ಸಂಗಮವು ರಾಜ್ಯದ ಸಾಮಾಜಿಕ- ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಕೇರಳ ಸರ್ಕಾರದ ಸಹಯೋಗದೊಂದಿಗೆ ಟಿಡಿಬಿಯು ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಪಂಪಾದಲ್ಲಿ ಸೆಪ್ಟೆಂಬರ್‌ 20ರಂದು ಜಾಗತಿಕ ಅಯ್ಯಪ್ಪ ಸಂಗಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಟೀಕಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries