ಕೊಚ್ಚಿ: ಪಾಫ್ಯುಲರ್ ಫ್ರಂಟ್ ನ ಆಸ್ತಿಯನ್ನು ವಶಪಡಿಸಿಕೊಂಡಿದ್ದ ಎನ್.ಐ.ಎ. ಗೆ ಮತ್ತೊಂದು ಹಿನ್ನಡೆಯಾಗಿದೆ. ಕೊಚ್ಚಿ ಎನ್.ಐ.ಎ. ನ್ಯಾಯಾಲಯವು ಆರು ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ರದ್ದುಗೊಳಿಸಿದೆ.
ಎನ್.ಐ.ಎ. ನ್ಯಾಯಾಲಯವು ತಿರುವನಂತಪುರಂ ಶಿಕ್ಷಣ ಟ್ರಸ್ಟ್, ಪೂವಂಚಿರ ಹರಿತಮ್ ಫೌಂಡೇಶನ್, ಅಲುವಾದ ಪೆರಿಯಾರ್ ವ್ಯಾಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಪಾಲಕ್ಕಾಡ್ ನ ವಲ್ಲುವನಾಡ್ ಟ್ರಸ್ಟ್ ನ ಆಸ್ತಿಗಳನ್ನು ವಿಚಾರಣೆಯಿಂದ ವಿನಾಯಿತಿ ನೀಡಿದೆ. ಬಿಡುಗಡೆಯಾದ ಆಸ್ತಿಗಳಲ್ಲಿ ಕಾಸರಗೋಡಿನ ಚಂದ್ರಗಿರಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್.ಡಿ.ಪಿ.ಐ. ದೆಹಲಿ ಕಚೇರಿ ಸೇರಿವೆ.
2022 ರಲ್ಲಿ ಪಾಲಕ್ಕಾಡ್ ಶ್ರೀನಿವಾಸನ್ ಕೊಲೆ ಪ್ರಕರಣದ ನಂತರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆಸ್ತಿಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಎನ್.ಐ.ಎ. ಆರೋಪಿಸಿತ್ತು.
ಎನ್.ಐ.ಎ. ವಶಪಡಿಸಿಕೊಂಡ ಎಲ್ಲಾ ಆಸ್ತಿಗಳು ಖಾಸಗಿ ವ್ಯಕ್ತಿಗಳ ಒಡೆತನದಲ್ಲಿದೆ ಎಂಬ ವಾದವನ್ನು ಕೊಚ್ಚಿ ಎನ್.ಐ.ಎ. ನ್ಯಾಯಾಲಯ ಒಪ್ಪಿಕೊಂಡಿದೆ. ಕೊಚ್ಚಿಯ ಎನ್.ಐ.ಎ. ನ್ಯಾಯಾಲಯವು, ಪಾಫ್ಯುಲರ್ ಫ್ರಂಟ್ ಜೊತೆ ಆಸ್ತಿ ಮಾಲೀಕರ ಸಂಪರ್ಕವನ್ನು ಎನ್.ಐ.ಎ.ಗೆ ಸಾಬೀತುಪಡಿಸಬೇಕಾಗಿಲ್ಲ ಎಂದು ಗಮನಿಸಿದೆ.
ಕಳೆದ ಜೂನ್ನಲ್ಲಿ, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಪಟ್ಟಣಂತಿಟ್ಟ, ಎರ್ನಾಕುಳಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತೆಗೆದುಕೊಂಡ ಕ್ರಮವನ್ನು ಎನ್.ಐ.ಎ. ನ್ಯಾಯಾಲಯ ರದ್ದುಗೊಳಿಸಿತ್ತು.




