HEALTH TIPS

ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತ: ಕೊನೆಯುಸಿರೆಳೆದ ಪತಿ

 ಕೊಲ್ಲಂ: ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯು ಕೊನೆಯುಸಿರೆಳೆದ ಘಟನೆಯು ಕೇರಳದ ನಡುವತ್ತೂರಿನಲ್ಲಿ ಜರುಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶ್ಯಾಮಸುಂದರ(41) ಎನ್ನುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ಧನುಷ್‌(37) ಅವರನ್ನು ಬಂಧಿಸಲಾಗಿದೆ.

ನಾಲ್ಕು ವರ್ಷದ ಹಿಂದೆ ಇಬ್ಬರಿಗೂ ಜಗಳವಾಗಿತ್ತು. ನಂತರ ಶ್ಯಾಮಸುಂದರ ಅವರ ಪತ್ನಿ ಹಾಗೂ ಮಗು, ಆರೋಪಿಯ ಜೊತೆಯಲ್ಲೇ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಮತ್ತೆ ಅವರಿಬ್ಬರ ನಡುವೆ ಜಗಳವಾಗಿತ್ತು. ತನ್ನ ಪತ್ನಿಯನ್ನು ಉಪಯೋಗಿಸಿಕೊಂಡು, ಆಸ್ತಿ ಕಬಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಶ್ಯಾಮಸುಂದರ ಅವರು ಧನುಷ್‌ ಮೇಲೆ ಆರೋಪಿಸಿದ್ದರು. ನೆರೆಹೊರೆಯವರು ಜಗಳ ಬಿಡಿಸಿದ್ದರು. ಆದರೆ, ನಂತರ ಆರೋಪಿಯು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಥಳೀಯರು ತಕ್ಷಣವೇ ಶ್ಯಾಮಸುಂದರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries