HEALTH TIPS

"ಹಿಂದೂ ವಿರೋಧಿಯಲ್ಲಿ ಸಿದ್ದರಾಮಯ್ಯ, ಪಿಣರಾಯಿ ವಿಜಯನ್ ಮತ್ತು ಸ್ಟಾಲಿನ್ ತ್ರಿಮೂರ್ತಿಗಳು; ಕಮ್ಯುನಿಸ್ಟರು ಎಂದಿಗೂ ದೇವರನ್ನು ನಂದವರು: ಅವರಾಡಿರುವುದು ನಾಟಕ: ತೇಜಸ್ವಿ ಸೂರ್ಯ

ಪತ್ತನಂತಿಟ್ಟ: ಕಮ್ಯುನಿಸ್ಟರು ಅಯ್ಯಪ್ಪ ಸಂಗಮ ನಡೆಸಿರುವುದು ವಿಪರ್ಯಾಸ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಕಮ್ಯುನಿಸ್ಟರು ಎಂದಿಗೂ ದೇವರನ್ನು ನಂಬದವರು. ಆದರೆ ಇಂದು ಅವರು ಭಕ್ತರನ್ನು ಮೋಸಗೊಳಿಸುವ ಮೂಲಕ ನಾಟಕ ಆಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಿನ್ನೆ ಪಂದಳದಲ್ಲಿ ನಡೆದ ಶಬರಿಮಲೆ ರಕ್ಷಣಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 


'ಪಂಪಾದಲ್ಲಿ ನಡೆದ ಅಯ್ಯಪ್ಪ ಸಂಗಮದ ಚಿತ್ರಗಳನ್ನು ನಾನು ನೋಡಿದ್ದೆ. ಅಲ್ಲಿ ಖಾಲಿ ಕುರ್ಚಿಗಳು ಮಾತ್ರ ಇದ್ದವು. ಇಂದು ನಡೆಯುತ್ತಿರುವ ಕಾರ್ಯಕ್ರಮವನ್ನು ಸರ್ಕಾರದ ಬೆಂಬಲದೊಂದಿಗೆ ಎಂದಿಗೂ ಆಯೋಜಿಸಲಾಗಿಲ್ಲ, ಇದರ ಹಿಂದೆ ಅಯ್ಯಪ್ಪ ಭಕ್ತರಿದ್ದಾರೆ' ಎಂದವರು ಉಲ್ಲೇಖಿಸಿದರು.

'ಕಮ್ಯುನಿಸ್ಟರು ಅಯ್ಯಪ್ಪ ಭಕ್ತರ ಸಂಗಮ ನಡೆಸಿರುವುದು ವಿಪರ್ಯಾಸ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸಂಗಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಸನಾತನ ಧರ್ಮವನ್ನು ವಿರೋಧಿಸುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಿಣರಾಯಿ ಏಕೆ ಕರೆಯಲಿಲ್ಲ? ಅವರು ಹಿಂದೂ ವಿರೋಧಿ ತ್ರಿಮೂರ್ತಿಗಳು' ಎಂದು ತೇಜಸ್ವಿ ಸೂರ್ಯ ಕುಟುಕಿದರು.

'ಇತ್ತೀಚೆಗೆ ಧರ್ಮಸ್ಥಳದ ಬಗ್ಗೆ ಹಲವಾರು ಆರೋಪಗಳನ್ನು ಮಾಡಲಾಗಿತ್ತು. ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಯೂಟ್ಯೂಬರ್ ಒಬ್ಬರು ಆರೋಪಿಸಿದರು. ತಕ್ಷಣವೇ ತನಿಖೆ ಆರಂಭಿಸಲಾಯಿತು. ಕೇರಳ ಮತ್ತು ತಮಿಳುನಾಡು ವಿಶೇಷ ತನಿಖಾ ತಂಡವನ್ನು ಘೋಷಿಸಿ ಧರ್ಮಸ್ಥಳ ತಲುಪಿದ್ದವು. ಆದರೆ ಅಲ್ಲಿಂದ ಏನೂ ಲಭಿಸಲಿಲ್ಲ. ಪ್ರವಾಸಿಗರಂತೆ  ಬಂದು ತೆರಳಿದರು.  ಶಬರಿಮಲೆಯಲ್ಲೂ ಇದೇ ರೀತಿಯ ನಾಟಕ ನಡೆಯುತ್ತಿದೆ' ಎಂದು ತೇಜಸ್ವಿ ಸೂರ್ಯ ಹೇಳಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries