HEALTH TIPS

ವರ್ಕಾಡಿ ಷಷ್ಠೀ ಮಹೋತ್ಸವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 24 ರಿಂದ 28ರ ವರೆಗೆ ನಡೆಯಲಿರುವ  ಷಷ್ಠೀ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ತಂತ್ರಿ ಬ್ರಹ್ಮಶ್ರೀ ದಿನೇಶಕೃಷ್ಣ ಶುಕ್ರವಾರ ಬಿಡುಗಡೆಗೊಳಿಸಿದರು. ಪ್ರಧಾನ ಅರ್ಚಕ ವಾಸುದೇವ ಮಯ್ಯ, ಆಡಳಿತ ಮೊಕ್ತೇಸರ ಸುಭಾಸ್ ಚಂದ್ರ ಅಡಪ್ಪ, ಗೌರವಾಧ್ಯಕ್ಷ ದುರ್ಗಾದಾಸ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಪಾವಳ, ಮೊಕ್ತೇಸರ ಶ್ಯಾಮ್ ವಿಠ್ಠಲ ಕೋಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ರೈ ಕಲ್ಪಣೆ ಮತ್ತಿತರರು ಉಪಸ್ಥಿತರಿದ್ದರು.

ಉತ್ಸವದ ಅಂಗವಾಗಿ ನ. 19 ರಂದು ಅಮಾವಾಸ್ಯೆ ರಂಗಪೂಜೆ, ನ. 24 ರಂದು ಧ್ವಜಾರೋಹಣ, 25 ರಂದು ಪಂಚಮಿ ಉತ್ಸವ, 26 ರಂದು ತುಲಾಭಾರ, ಷಷ್ಠೀ ಮಹೋತ್ಸವ, ರಾತ್ರಿ ಬಲಿ ಉತ್ಸವ,  27 ರಂದು ಸಪ್ತಮೀ ಉತ್ಸವ, ಶಯನ, 28 ರಂದು ಅವಭೃತ ಮತ್ತು ಧ್ವಜಾವರೋಹಣ ನಡೆಯಲಿದೆ. ಕ್ಷೇತ್ರದ ಸರ್ವ ಭಕ್ತಾದಿಗಳು ಷಷ್ಠೀ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಉತ್ಸವ ಸಮಿತಿ ಮತ್ತು ಆಡಳಿತ ಮಂಡಳಿ ವಿನಂತಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries