ಪ್ರಶಸ್ತಿ ಪುರಸ್ಕೃತರು :
ಪೌರ ಕಾರ್ಮಿಕರಾದ ಫಕೀರವ್ವ ಅವರಿಗೂ ಪ್ರಶಸ್ತಿ ನೀಡಲಾಗಿದೆ. ವೀಣೆಬ್ರಹ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದ ಪೆನ್ನ ಓಬಳಯ್ಯ, ಐಎಎಸ್ ಅಧಿಕಾರಿ ಸಿದ್ದಯ್ಯ, ನಟ ಪ್ರಕಾಶ್ ರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ 6 ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.
ಈ ಬಾರಿ ಜಿಲ್ಲಾವಾರು ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಿಕೆ ಮಾಡಲಾಗಿದೆ. 2114 ಅರ್ಜಿ ಬಂದ್ದವು. ಇವುಗಳಲ್ಲಿ 70 ಪ್ರಶಸ್ತಿಗಳನ್ನ ಸರ್ಕಾರ ನೀಡಿದೆ. ಇದರಲ್ಲಿ ಮಹಿಳೆಯರಿಗೆ 13 ಪ್ರಶಸ್ತಿ ಕೊಡಲಾಗಿದೆ. 60 ವರ್ಷ ದಾಟಿದವರು ಮಾತ್ರವೇ ಈ ಪ್ರಶಸ್ತಿಗೆ ಅರ್ಹರಾಗಿದ್ದರು.
'ಸಣ್ಣ ಸಣ್ಣ ಕಮ್ಯುನಿಟಿಗಳನ್ನ ಗುರುತಿಸಿ ಪ್ರಶಸ್ತಿ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ ಆಸೆಯಂತೆ ಸಾಮಾಜಿಕ ನ್ಯಾಯ , ಪ್ರತಿಭೆಯನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಲಹಾ ಸಮಿತಿ ಸದಸ್ಯರು ಹಾಗೂ 5 ಉಪ ಸಮಿತಿ ಸದಸ್ಯರು 3 ದಿನ ಕುಳಿತು ಸಭೆ ಮಾಡಿ ಒಳ್ಳೆ ಒಳ್ಳೆ ಆಯ್ಕೆ ಕೊಟ್ಟಿದ್ದಾರೆ. ಈ ಬಾರಿ 2315 ಅರ್ಜಿ ಬಂದಿತ್ತು. ಅರ್ಜಿ ಹಾಕದೇ ಇರುವವರನ್ನ ಗುರುತಿಸಿ ಕೂಡ ಪ್ರಶಸ್ತಿ ಕೊಡಲಾಗುತ್ತಿದೆ.
ಏನಿರಲಿದೆ ಪ್ರಶಸ್ತಿ
ಪ್ರಶಸ್ತಿಯಲ್ಲಿ 22 ಕ್ಯಾರಟ್ಗ 25 ಗ್ರಾಂ ಚಿನ್ನ. 5 ಲಕ್ಷ ಹಣದ ಚೆಕ್ ಹಾಗೂ ಪ್ರಮಾಣ ಪತ್ರ,ಭುವನೇಶ್ವರಿ ವಿಗ್ರಹ, ಶಾಲು, ಫಲಕ ವಿತರಣೆ ಮಾಡಲಾಗುತ್ತದೆ. ನ.1 ರ ಸಂಜೆ ಚಹಾ ಕೂಟ ಆಯೋಜನೆಯಾಗಲಿದ್ದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕಳೆದ ಬಾರಿ ಕನ್ನಡ ರಾಜ್ಯೋತ್ಸವ ಮಾಡಿ ಅಂತ ಕಡ್ಡಾಯ ಮಾಡಿದ್ದೆವು. ಈ ಬಾರಿಯೂ ಕಡ್ಡಾಯವಾಗಿ ಎಲ್ಲರೂ ಆಚರಣೆ ಮಾಡಬೇಕು. ಆದೇಶ ಮಾಡುವುದರ ಬಗ್ಗೆ ಡಿಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.




