ಉಪ್ಪಳ: ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ `ಸಾಂತ್ವನ' ಯೋಜನೆಯಡಿಯಲ್ಲಿ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯ ಪೈವಳಿಕೆ ಪಲ್ಲಕುಡೇಲಿನ ಇಬ್ರಾಹಿಂ ಇವರ ಪುತ್ರ ಅಬ್ದುಲ್ ಅಜೀಜ್ ಅವರ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗಾಗಿ ಸಹಾಯಧನ 3,00,000 (ಮೂರುಲಕ್ಷ) ದ ಚೆಕ್ ನ್ನು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಗುರುವಾರ ಬಾಯಾರು ಶಾಖೆಯಲ್ಲಿ ಹಸ್ತಾಂತರಿಸಿದರು. ಕ್ಯಾಂಪ್ಕೋ ನಿರ್ದೆಶಕ ಬಾಲಕೃಷ್ಣ ರೈ ಬಾನೊಟ್ಟು, ಡಾ. ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಯಂ., ಬಾಯಾರು ಶಾಖಾ ಪ್ರಬಂಧಕ ರಮೇಶ್ ವೈ. ಮತ್ತು ಬಾಯಾರು ಕ್ಯಾಂಪ್ಕೋ ಸಿಬ್ಬಂದಿಗಳು ಉಪಸ್ಥಿತರಿದ್ದರು.

.jpg)
