ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕøತಿಕ ಭವನದಲ್ಲಿ ಸವ್ಯಸಾಚಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಅವರ ನೇತೃತ್ವದಲ್ಲಿ ನೂತನ ಯಕ್ಷಗಾನ ತರಬೇತಿ ತರಗತಿ ಉದ್ಘಾಟನೆಗೊಂಡಿತು. ಊರಿನ ಪ್ರಮುಖರಾದ ಹರಿನಾರಾಯಣ ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ನಿವೃತ್ತ ದೈಹಿಕ ಶಿಕ್ಷಕ ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೋಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ರವೀಂದ್ರನಾಥ ಭಂಡಾರಿ ನಾರಂಪಾಡಿ, ಸತೀಶ್ ಮಾಸ್ತರ್ ಅಗಲ್ಪಾಡಿ, ಸಂತೋಷ್ ರೈ ಗಾಡಿಗುಡ್ಡೆ, ನಟರಾಜ ಕಲ್ಲಕಳಂಬಿ, ರವಿರಾಜ್ ಮಾಸ್ತರ್ ಅಗಲ್ಪಾಡಿ, ಗೋಪಾಲಕೃಷ್ಣ ಸಿ ಎಚ್, ಗುರುರಾಜ್ ಭಟ್ ಮಾಳಿಗೆಮನೆ, ಶ್ಯಾಮ್ ಆಳ್ವ ಕಡಾರುಬೀಡು ಶುಭ ಹಾರೈಸಿದರು. ಸುಧಾಮ ಪದ್ಮಾರು, ಅಚ್ಯುತ ಮಾಸ್ತರ್ ಅಗಲ್ಪಾಡಿ, ಗಂಗಾಧರ ಮಹಾಬಲತೊಟ್ಟಿ ಉಪಸ್ಥಿತರಿದ್ದರು. ಪಾಂಚಜನ್ಯ ಬಾಲಗೋಕುಲದವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಉದಯ್ ಕುಮಾರ್ ಕಲ್ಲಕಟ್ಟ ವಂದಿಸಿದರು, ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

.jpg)
