HEALTH TIPS

ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ-ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆ

ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ   ಕಾಸರಗೋಡು ಕನ್ನಡ ಗ್ರಾಮದಲ್ಲಿ  2025  ನವಂಬರ್ 4ರಂದು  ನಡೆಯುವ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ  ಹಾಗೂ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕೇರಳ  ರಾಜ್ಯದ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ,ಪ್ರಬಂಧ, ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಣ್ಣ ಕಥೆ ರಚನೆ ಎ-4 ಅಳತೆಯ ಹಾಳೆಯಲ್ಲಿ ಒಂದು ಪುಟಕ್ಕೆ ಸೀಮಿತವಾಗಿರಬೇಕು. ಕವನ ರಚನೆ ಸ್ಪರ್ಧೆಗೆ 12 ಸಾಲು ಮೀರಬಾರದು. 'ನಾನು ಓದಿದ ಉತ್ತಮ ಪುಸ್ತಕ'ಎಂಬ ವಿಷಯದಲ್ಲಿ ಎ-4 ಹಾಳೆಯಲ್ಲಿ  ಎರಡು ಪುಟ ಮೀರದಂತಿರಬೇಕು. ಕೇರಳ ರಾಜ್ಯ - ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ,ಉದ್ಯೋಗ, ವ್ಯವಹಾರದಲ್ಲಿರುವವರು ಮತ್ತು ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು ರಾಜ್ಯ, ದೇಶ, ವಿದೇಶಗಳಲ್ಲಿ ವಾಸವಾಗಿರುವ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸಬಹುದು.

ಪ್ರತಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನದೊಂದಿಗೆ 60 ಮಂದಿಗೆ ಆಯ್ಕೆ ಸಮಿತಿಯವರು ಗುರುತಿಸಲ್ಪಟ್ಟ ಸಣ್ಣ ಕಥೆ, ಕವನ, ಪ್ರಬಂಧ ರಚಿಸಿದ ಸಾಹಿತ್ಯಾಸಕ್ತರಿಗೆ ವಿಶೇಷ ಬಹುಮಾನ,ಪ್ರಮಾಣ ಪತ್ರ,ಸ್ಮರಣಿಕೆಯೊಂದಿಗೆ  ಗೌರವಿಸಲಾಗುವುದು.

ಸಾಹಿತ್ಯಾಸಕ್ತರು, ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು-671121 (ಮೊಬೈಲ್-9448572016,990195196)ಎಂಬ ವಿಳಾಸಕ್ಕೆ . 20ರ ಮೊದಲು ಅಂಚೆ ಮೂಲಕ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries