ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪೆÇೀಲೀಸ್ ಠಾಣಾಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಆದೇಶದನ್ವಯ ಚುನಾವಣಾ ಪೂರ್ವಭಾವಿ ಈ ವರ್ಗಾವನೆ ನಡೆಸಲಾಗಿದೆ.
ಮಂಜೇಶ್ವರ ಪೆÇೀಲೀಸ್ ಠಾಣೆಗೆ ನೂತನ ಎಸ್. ಐ ಯಾಗಿ ಹೊಸದುರ್ಗ ಠಾಣೆಯ ಪಿ. ಅಜಿತ್ ಕುಮಾರ್ ಅವರನ್ನು ನೇಮಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿದ್ದ ಅನೂಪ್ ಕುಮಾರ್ ಅವರನ್ನು ಹೊಸದುರ್ಗ ಠಾಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಅಂಬಲತ್ತರ ಪೆÇೀಲೀಸ್ ಠಾಣಾಧಿಕಾರಿಯಾಗಿದ್ದ ಕೆ. ಪಿ. ಶ್ರೀಶನ್ ಅವರನ್ನು ವಿದ್ಯಾನಗರ ಠಾಣೆಗೆ ವರ್ಗಾಯಿಸಿ, ಅಂಬಲತ್ತರ ಠಾಣೆಗೆ ಚಿತ್ತಾರಿಕಲ್ ಠಾಣೆಯಲ್ಲಿದ್ದ ರಂಜಿತ್ ರವೀಂದ್ರನ್ ಅವರನ್ನು ನೇಮಿಸಲಾಗಿದೆ.
ವಿದ್ಯಾನಗರ ಠಾಣೆಯಲ್ಲಿದ್ದ ಯು. ಪಿ ವಿಪಿನ್ ಅವರನ್ನು ಬೇಕಲ ಠಾಣೆಗೂ, ಬೇಕಲ ಠಾಣೆಯಲ್ಲಿದ್ದ ಎಂ. ವಿ. ಶ್ರೀದಾಸ್ ಅವರನ್ನು ಚೀಮೇನಿಗೂ ವರ್ಗಾಯಿಸಲಾಗಿದೆ.
ಕುಂಬಳೆ ಠಾಣಾಧಿಕಾರಿಯಾಗಿದ್ದ ಜಿಜೇಷ್ ಅವರನ್ನು ಕಾಸರಗೋಡು ನಗರ ವಿಜಿಲೆನ್ಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಮೇಲ್ಪರಂಬ ಠಾಣೆಗೆ ಎ. ಸಂತೋಷ್ ಕುಮಾರ್ ಅವರನ್ನು ಮತ್ತು ಬದಿಯಡ್ಕ ಠಾಣೆಗೆ ಅನಿಲ್ ಕುಮಾರ್ ಅವರನ್ನು ನೇಮಿಸಲಾಗಿದೆ. ಆದೂರು ಠಾಣೆಗೆ ಎಂ. ವಿ. ವಿಷ್ಣು ಪ್ರಸಾದ್ ಅವರನ್ನು ನೇಮಿಸಲಾಗಿದೆ.

