ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಇತಿಹಾಸ ಸಾರುವ, ರಾಮ್ ಎಲ್ಲಂಗಳ ಮತ್ತು ಖ್ಯಾತ ಯಕ್ಷಗಾನ ಪ್ರಸಂಗ ಕರ್ತ ಮಧೂರು ವೆಂಕಟಕೃಷ್ಣ ವಿರಚಿತ ಶ್ರೀ ಮಧೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಅ. 25ರಂದು ಸಂಜೆ 7ಕ್ಕೆ ಮಧೂರು ದೇಗುಲ ಸಭಾಂಗಣದಲ್ಲಿ ಜರುಗಲಿದೆ.
ಯಕ್ಷಕಲಾ ಕೌಸ್ತುಭ ಮಧೂರು ವತಿಯಿಂದ ಕಾರ್ಯಕ್ರಮ ಜರುಗಲಿದೆ. ತೆಂಕು ಹಾಗೂ ಬಡಗು ತಿಟ್ಟಿನ ಕಲಾವಿದರನ್ನೊಳಗೊಂಡ ಕಲಾವಿದರ ಅಪೂರ್ವ ಸಮ್ಮಿಲನದೊಂದಿಗೆ ಯಕ್ಷಗನ ಬಯಲಾಟ ಜರುಗಲಿದೆ. ವಿಶೇಷ ಆಕರ್ಷಣೆಯಾಗಿ ಪ್ರಸಂಗ ಆರಂಭದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕುಡುವಿಕೆಯಿಂದ ಶಿವತಾಂಡವ ನೃತ್ಯ ಆಯೋಜಿಸಿರುವುದಾಘಿ ಪ್ರಕಟಣೆ ತಿಳಿಸಿದೆ.

