HEALTH TIPS

ಯಕ್ಷ ಸಾಹಿತ್ಯಕ್ಕೆ ಸ್ಪುಟವಾದ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಶ್ರೇಷ್ಠ ಭಾಗವತ ಅಮ್ಮಣ್ಣಾಯರು- 'ಸಾವಿರದ ಗಾನ ಕೋಗಿಲೆಗೆ ಸಾವಿರದ ಗೌರವ' ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿ ಅಭಿಪ್ರಾಯ

ಕಾಸರಗೋಡು: ಸಂಗೀತ ಪ್ರಧಾನ ಭಾಗವತಿಕೆ ಜತೆಗೆ ಯಕ್ಷ ಸಾಹಿತ್ಯಕ್ಕೆ ಸ್ಪುಟವಾದ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಶ್ರೇಷ್ಠ ಭಾಗವತರಾಗಿ ದಿನೇಶ ಅಮ್ಮಣ್ಣಾಯ ಮೂಡಿಬಂದಿದ್ದಾರೆ ಎಂದು ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ತಿಳಿಸಿದ್ದಾರೆ.

ಅವರು ಎಡನೀರು ಮಠದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತೆಂಕು ತಿಟ್ಟಿನ ಖ್ಯಾತ ಭಾವ ಭಾಗವತ, ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯ ಅವರಿಗೆ 'ಸಾವಿರದ ಗಾನ ಕೋಗಿಲೆಗೆ ಸಾವಿರದ ಗೌರವ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಹೃದಯದಲ್ಲಿ ಭಾವೋತ್ಕರ್ಷದ ಹರ್ಷವನ್ನು ಸೃಷ್ಟಿ ಮಾಡುವ ಶಕ್ತಿಯನ್ನು ದಿನೇಶ ಅಮ್ಮಣ್ಣಾಯ ಅವರು ತನ್ನ ಭಾಗವತಿಕೆ ಮೂಲಕ ಪ್ರಚುರಪಡಿಸಿದ್ದಾರೆ. ಸಾವಿರದ ಗಾನಕೋಗಿಲೆ ಅಮ್ಮಣ್ಣಾಯ ನಮ್ಮಿಂದ ದೂರಾಗಿರಬಹುದು, ಅವರ ಹಾಡಿಗೆ ಸಾವಿಲ್ಲ. ಕಾಲಗರ್ಭದಲ್ಲಿ ಲೀನವಾಗಿರುವ ಅಮ್ಮಣ್ಣಾಯ ಅವರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಹೆಸರಲ್ಲಿ ಸ್ಮಾರಕ ಕುಟೀರ ನಿರ್ಮಾಣಕ್ಕೆ ಣಾವುಪಣತೊಡಬೇಕಾಗಿದೆ ಎಂದು ತಿಳಿಸಿದರು. 

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡಿದರು.  ದಿನೇಶ ಅಮ್ಮಣ್ಣಾಯ ಅವರ ಹಾಡುಗಳಲ್ಲಿರುವ ಭಾವ, ರಾಗ ಶೂದ್ಧತೆ, ಸಪಷ್ಟತೆಯನ್ನು ಮುಂದಿನ ತಲೆಮಾರು ಅನುಸರಿಸಿಕೊಂಡು ಬರುವ ಪ್ರಯತ್ನವಾಗಬೇಕು. ಗಾನಕೋಗಿಲೆ ಅಮ್ಮಣ್ಣಾಯ ಅವರ ಹೆಸರಲ್ಲಿ ಪ್ರತಿಷ್ಠಾನ ಮಾಡಿ, ವರ್ಷಂಪತ್ರಿ ಅವರ ಸಂಸ್ಮರಣೆ ನಡೆಸಿ, ಅವರ ಹೆಸರಲ್ಲಿ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಈ ಬಗ್ಗೆ ಅವರ ಅಭಿಮಾನಿಗಳು ನಡೆಸುವ ಪ್ರಯತ್ನಕ್ಕೆ ಶ್ರೀಮಠ ಬೆಂಬಲ ನೀಡುವುದಾಗಿ ತಿಳಿಸಿದರು.  

ಸಾಮಾಜಿಕ, ಸಾಂಸ್ಕøತಿಕ ಧುರೀಣ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಯಗಿ ಭಾಗವಹಿಸಿದ್ದರು.  ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ತೆಂಕು ತಿಟ್ಟಿನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಹಿರಿಯ ಹಿಮ್ಮೇಳ ವಾದಕ ಪದ್ಯಾಣ ಶಂಕರನಾರಾಯಣ ಭಟ್, ಗೌರವ ಉಪಸ್ಥಿತರಿದ್ದರು. 

ಯಕ್ಷಗಾನ ಕಲಾವಿದ ಎಂ.ಎಲ್ ಸಾಮಗ, ಚಿತ್ರನಟ, ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನ, ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್,  ಹಿರಿಯ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಕಲಾವಿದರಾದ ಸಂಜಯ ಕುಮಾರ್ ಗೋಣಿಬೀಡು, ಜಬ್ಬಾರ್ ಸಮೋ ಸಂಪಾಜೆ, ಸರಪಾಡಿ ಅಶೋಕ್ ಶೆಟ್ಟಿ, ಯಕ್ಷಗಾನ ಕಲಾವಿದ ವಾಸುದೇವ ರಂಗಭಟ್ಟ,  ಡಿ. ಮನೋಹರ್ ನುಡಿ ಗೌರವ ಸಲ್ಲಿಸಿದರು. ಹಿರಿಯ ಧಾರ್ಮಿಕ ಮುಖಂಡ ಕುಂಟಾರು ರವೀಶ ತಂತ್ರಿ, ಧರ್ಮಸ್ಥಳದ ಭುಜಬಲಿ ಉಪಸ್ಥಿತರದ್ದರು. 

ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು.  ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಕಯ್ಯೂರು ನಾರಾಯಣ ಭಟ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರೆಗೆ ಯಕ್ಷಗಾನದ ಖ್ಯಾತ ಹಿರಿಯ, ಕಿರಿಯ  ಹಿಮ್ಮೇಳ ಕಲಾವಿದರಿಂದ ಗಾನ ಗೌರವ ಕಾರ್ಯಕ್ರಮ ನಡೆಯಿತು. ಯಕ್ಷ ಗೌರವ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗನ ಕಲಾವಿದರಿಂದ'ಅಕ್ಷಯಾಂಬರ ವಿಲಾಸ'ಯಕ್ಷಗಾನ ಬಯಲಾಟ ಜರುಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries