HEALTH TIPS

ಛತ್ತೀಸಗಢ: ಶೇ 80ರಷ್ಟು ನಕ್ಸಲ್‌ ಚಟುವಟಿಕೆ ನಿರ್ನಾಮ; ಡಿಸಿಎಂ

 ರಾಯಪುರ : 'ರಾಜ್ಯದಲ್ಲಿ ಶೇಕಡ 80ರಷ್ಟು ನಕ್ಸಲ್‌ ಪಿಡುಗನ್ನು ತೊಡೆದುಹಾಕಲಾಗಿದೆ. ಪಶ್ಚಿಮ ಭಾಗವಾದ ಅಭುಜಮಾಡ್‌, ದಕ್ಷಿಣ ಭಾಗವಾದ ಸುಕ್ಮಾ, ಬಿಜಾಪುರದ ಕೆಲವು ಭಾಗಗಳಲ್ಲಿ ಮಾತ್ರ ಉಳಿದಿದೆ. ಬಸ್ತರ್‌ನಲ್ಲಿ ಕೊನೆಗೂ ಯಾವುದೇ ಭಯವಿಲ್ಲದೇ, ಉಸಿರಾಡುವಂತಾಗಿದೆ' ಎಂದು ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ತಿಳಿಸಿದ್ದಾರೆ.


'2026ರ ಮಾರ್ಚ್‌ ತಿಂಗಳ ಒಳಗಾಗಿ ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ನಿಗದಿತ ಸಮಯದಲ್ಲಿ ಈ ಕೆಲಸವೂ ಯಶಸ್ವಿಯಾಗಿ ಪೂರ್ಣವಾಗಲಿದೆ' ಎಂದು ಹೇಳಿದ್ದಾರೆ.

'ಪರಿಸ್ಥಿತಿಯೂ ಶೀಘ್ರದಲ್ಲಿ ಸ್ಥಿರವಾಗುವ ಹಂತಕ್ಕೆ ತಲುಪಲಿದ್ದು, ಬಸ್ತರ್‌ ಮೂಲಕ ಹರಿದುಹೋಗುವ ಇಂದ್ರಾವತಿ ನದಿ ದಂಡೆಯಲ್ಲಿ ಕೂತು ನಿಶ್ಚಿಂತೆಯಿಂದ ಚಹಾ ಕುಡಿಯಬಹುದು. ಬಸ್ತರ್‌ನ ನೀರು, ಅರಣ್ಯ ಹಾಗೂ ಜಮೀನು ಬಸ್ತರ್‌ನ ಜನರಿಗೆ ಸೇರಿದ್ದಾಗಿದೆ. ಇಲ್ಲಿನ ಯುವಕರೇ ದೇಶದ ಭವಿಷ್ಯವನ್ನೇ ರೂಪಿಸಲಿದ್ದಾರೆ ಎಂದು ನಂಬಿದ್ದೇನೆ' ಎಂದು ತಿಳಿಸಿದ್ದಾರೆ.

'ನಕ್ಸಲೀಯರು ಶಸ್ತ್ರತ್ಯಜಿಸಿ, ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಮುಂದಾದರೆ ಅವರನ್ನು ಸರ್ಕಾರ ಸ್ವಾಗತಿಸಲಿದೆ. ಅವರ ಪುನರ್ವಸತಿ ನಿಟ್ಟಿನಲ್ಲಿ ಎಲ್ಲ ಜವಾಬ್ದಾರಿಗಳನ್ನು ಸರ್ಕಾರವೇ ತೆಗೆದುಕೊಳ್ಳಲಿದೆ. ಅದೇ ರೀತಿ, ಶೋಧ ಕಾರ್ಯಾಚರಣೆ ಹಾಗೂ ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣ ನಿರ್ನಾಮ ಮಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ' ಎಂದು ಶರ್ಮಾ ಎಚ್ಚರಿಕೆ ನೀಡಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries