HEALTH TIPS

ಎರ್ನಾಕುಳಂ-ಬೆಂಗಳೂರು ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಕೊಚ್ಚಿ: ಕೇರಳಕ್ಕೆ ಹೊಸದಾಗಿ ಹಂಚಿಕೆ ಮಾಡಲಾದ ಎರ್ನಾಕುಟಂ-ಬೆಂಗಳೂರು ವಂದೇ ಭಾರತ್ ಎಕ್ಸ್‍ಪ್ರೆಸ್ (26651/26652) ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. 


ರೈಲಿನ ಉದ್ಘಾಟನಾ ಪ್ರಯಾಣವು ಎರ್ನಾಕುಳಂ ದಕ್ಷಿಣ ರೈಲು ನಿಲ್ದಾಣದಿಂದ ಪ್ರಾರಂಭವಾಯಿತು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಕೇಂದ್ರ ಸಚಿವರಾದ ಸುರೇಶ್ ಗೋಪಿ, ಜಾರ್ಜ್ ಕುರಿಯನ್, ಸಚಿವ ಪಿ ರಾಜೀವ್ ಮತ್ತು ಇತರ ಪ್ರತಿನಿಧಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ಎಂಟು ಬೋಗಿಗಳ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಚೇರ್ ಕಾರ್‍ನ ಟಿಕೆಟ್ ದರ 1095 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‍ಗೆ 228 ರೂ. ಎಂಟು ಬೋಗಿಗಳ ರೈಲು ಏಕಕಾಲದಲ್ಲಿ 600 ಪ್ರಯಾಣಿಕರು ಪ್ರಯಾಣಿಸಬಹುದಾದ ರೀತಿಯಲ್ಲಿ ಸಜ್ಜುಗೊಂಡಿದೆ.

ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮ ವ್ಯಕ್ತಿಗಳು, ಶಿಕ್ಷಕರು, ಮಕ್ಕಳು ಮತ್ತು ಸಾಮಾಜಿಕ ಮಾಧ್ಯಮ ಪ್ರತಿನಿಧಿಗಳು, ವಿಶೇಷ ಟಿಕೆಟ್‍ಗಳನ್ನು ಹೊಂದಿರುವವರು ಮಾತ್ರ ಉದ್ಘಾಟನಾ ಸಂಚಾರದಲ್ಲಿ ಪ್ರಯಾಣಿಸಿದರು. ಎರ್ನಾಕುಳಂ-ಬೆಂಗಳೂರು ವಂದೇ ಭಾರತ್ ರೈಲಿನ ನಿಯಮಿತ ಸೇವೆ ನವೆಂಬರ್ 11 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಬುಕಿಂಗ್ ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಬೆಳಿಗ್ಗೆ ಪ್ರಾರಂಭವಾಗುತ್ತದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries