ಕಾಸರಗೋಡು: ಪೆನ್ಷನ್ ಪರಿಸ್ಕರಿಸಬೇಕು, ತಡೆಹಿಡಿದ ತುಟ್ಟಿಭತ್ಯೆ ವಿತರಿಸಬೇಕು, ಆರೋಗ್ಯ ವಿಮೆ ಆರಂಭಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಸ್ಟೇಟ್ ಸಹಕಾರಿ ಪೆನ್ಷನರ್ಸ್ ಅಸೋಸಿಯೇಶಾನ್ ಕಾಸರಗೋಡು ತಾಲೂಕು ಸಮಿತಿಯ ನೇತೃತ್ವದಲ್ಲಿ ಜೆ.ಆರ್. ಕಾರ್ಯಾಲಯದ ಮುಂಭಾಗ ಧರಣಿ ಮುಷ್ಕರ ನಡೆಸಲಾಯಿತು.
ಮುಷ್ಕರವನ್ನು ರಾಜ್ಯ ಕಾರ್ಯದರ್ಶಿ ಎಂ. ಮುಕುಂದನ್ ಉದ್ಘಾಟಿಸಿದರು. ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕುಂಞÂ್ಞ ರಾಮನ್ ನಾಯರ್, ಎಂ.ಕೆ. ರಾಘವನ್, ಎಂ.ಅಶೋಕ ರೈ,ನಾರಾಯಣಿ ಕುಟ್ಟಿ, ಶುಭಹಾರೈಸಿದರು. ಇ.ಪದ್ಮಾಕ್ಷನ್ ಸ್ವಾಗತಿಸಿ, ಎನ್.ವಿ.ಬಾಲನ್ ವಂದಿಸಿದರು.





