HEALTH TIPS

ನುಸುಳುಕೋರರನ್ನು ಮಟ್ಟ ಹಾಕುತ್ತೇವೆ: ಪ್ರಧಾನಿ ನರೇಂದ್ರ ಮೋದಿ

ಭಾಗಲ್ಪುರ: 'ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿಯು ನುಸುಳುಕೋರರಿಗೆ ಹಿಂಬಾಗಿಲು ತೆರೆದಿಟ್ಟಿದ್ದು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ರಾಮನ ಮೇಲೆ ದ್ವೇಷ ಸಾಧಿಸುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. 

ಭಾಗಲ್ಪುರ ಮತ್ತು ಅರರಿಯಾ ಜಿಲ್ಲೆಗಳಲ್ಲಿ ಗುರುವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ವಿರೋಧ ಪಕ್ಷದ ಮುಖಂಡರು ಆಯೋಧ್ಯೆ ಸೇರಿ ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡದಿರುವುದು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರ ಮೇಲೆ ಅವರಿಗಿರುವ ದ್ವೇಷವನ್ನು ಸೂಚಿಸುತ್ತದೆ' ಎಂದರು.

'ಜಂಗಲ್‌ ರಾಜ್‌' ಆಡಳಿತದ 15 ವರ್ಷಗಳಲ್ಲಿ ಬಿಹಾರದಲ್ಲಿ ಅಭಿವೃದ್ದಿ ಶೂನ್ಯವಾಗಿತ್ತು. ಈ ಅವಧಿಯಲ್ಲಿ ಕತ್ತಿ, ಕ್ರೌರ್ಯ, ನಿರ್ದಯ, ದುರಾಡಳಿತ ಮತ್ತು ಭ್ರಷ್ಟಾಚಾರವೇ ಹೆಗ್ಗುರುತುಗಳಾಗಿದ್ದವು. ಈ ಕತ್ತಲೆ ಯುಗದಿಂದ ಬಿಹಾರವನ್ನು ಹೊರತರಲು ಎನ್‌ಡಿಎ ನೇತೃತ್ವದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಾಕಷ್ಟು ಶ್ರಮ ವಹಿಸಿದರು. ಈಗ ಬಿಹಾರ ಅಭಿವೃದ್ಧಿ ಪಥದಲ್ಲಿದೆ. ಅಭಿವೃದ್ಧಿಗೆ ಅಡ್ಡಿಯಾಗಿರುವ ನುಸುಳುಕೋರರನ್ನು ಮಟ್ಟ ಹಾಕುವುದೇ ಈಗಿನ ಪ್ರಮುಖ ಸವಾಲಾಗಿದೆ' ಎಂದರು.

ನುಸುಳುಕೋರರು, ಅಕ್ರಮ ವಲಸಿಗರನ್ನು ಬೆಂಬಲಿಸುವ ನಿಟ್ಟಿನಲ್ಲಿ ರಾಜಕೀಯ ಯಾತ್ರೆಗಳು ನಡೆದವು' ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ 'ಮತದಾರರ ಅಧಿಕಾರ ಯಾತ್ರೆ'ಯನ್ನು ಮೋದಿ ಟೀಕಿಸಿದರು.

- ನರೇಂದ್ರ ಮೋದಿ ಪ್ರಧಾನಿ ಬಿಹಾರದಲ್ಲಿ ಜಂಗಲ್ ರಾಜ್ ಮರಳುವುದನ್ನು ತಡೆಯಲು ಮಹಿಳೆಯರು ಗುರುವಾರ ಮತಗಟ್ಟೆಗಳಲ್ಲಿ ಭದ್ರ ಕೋಟೆ ನಿರ್ಮಿಸಿರುವ ದೃಶ್ಯ ಕಂಡುಬಂತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries