HEALTH TIPS

ಎಸ್‌ಐಆರ್ | ಬಿಎಲ್‌ಒಗಳಿಗೆ ಒತ್ತಡ ಹೇರುತ್ತಿಲ್ಲ: ಕೇರಳ ಮುಖ್ಯ ಚುನಾವಣಾ ಆಯುಕ್ತ

ತಿರುವನಂತಪುರಂ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಾಧ್ಯವಿರುವ ಎಲ್ಲಾ ಸಹಾಯ ಮಾಡುತ್ತಿದ್ದೇವೆ. ಅವರಿಗೆ ಒತ್ತಡ ಹಾಕುವ ಉದ್ದೇಶ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಆಯುಕ್ತ ರತನ್ ಯು.ಕೇಲ್ಕರ್ ಶನಿವಾರ ಹೇಳಿದ್ದಾರೆ.

'ಒತ್ತಡ ಹೇರಬೇಕು ಎನ್ನುವ ಉದ್ದೇಶದೊಂದಿಗೆ ಬಿಎಲ್‌ಒಗಳಿಗೆ ಗುರಿ ನಿಗದಿ ಪಡಿಸಿಲ್ಲ, ಆದರೆ ಎಸ್‌ಐಆರ್‌ ಅನ್ನು ನಿಗದಿತ ಸಮಯದೊಳಗೆ ಮುಗಿಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ' ಎಂದು ಅವರು ಮಾಧ್ಯಮದವರೊಂದಿಗೆ ಹೇಳಿದ್ದಾರೆ.

ಬಿಎಲ್‌ಒಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿ ಕ್ರಮವಾಗಿ ಕನ್ನಡ ಹಾಗೂ ತಮಿಳು ಮಾತನಾಡುವ ಜನರಿದ್ದು, ಅಲ್ಲಿಯ ಜನ ಎಸ್‌ಐಆರ್ ನಮೂನೆಗಳನ್ನು ತುಂಬಿಸಲು ಸಹಾಯ ಮಾಡಲು ಬಿಎಲ್‌ಒಗಳ ಜೊತೆಗೆ ಈ ಭಾಷೆಯನ್ನು ತಿಳಿದಿರುವವನ್ನೂ ನೇಮಕ ಮಾಡಲಾಗಿದೆ. ಈವರೆಗೂ ಶೇ 70 ರಷ್ಟು ಮಂದಿ ನಮೂನೆಗಳನ್ನು ತುಂಬಿಸಿ ಹಿಂದಿರುಗಿಸಿದ್ದಾರೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries