HEALTH TIPS

ದೆಹಲಿ ಸ್ಪೋಟ: ಕೇರಳದಲ್ಲೂ ಕಟ್ಟೆಚ್ಚರ-ವಿವಿಧೆಡೆ ತಪಾಸಣೆ

ಕೋಝಿಕ್ಕೋಡ್: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೋಝಿಕ್ಕೋಡ್, ಮಲಪ್ಪುರಂ, ಎರ್ನಾಕುಳಂ, ಪಾಲಕ್ಕಾಡ್, ಅಲಪ್ಪುಳ ಮುಂತಾದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. 


ಕೋಝಿಕ್ಕೋಡ್ ರೈಲು ನಿಲ್ದಾಣ, ಬೀಚ್ ಮತ್ತು ಕೆಎಸ್,ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ತಪಾಸಣೆ ನಡೆಸಿತು. ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ಬೀಚ್‍ನಂತಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವ ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು ಎಂದು ಪೋಲೀಸರು ತಿಳಿಸಿದ್ದಾರೆ.

ದಿಲ್ಲಿ ಸ್ಫೋಟದ ನಂತರ, ಕೊಚ್ಚಿಯಲ್ಲಿಯೂ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಎರ್ನಾಕುಳಂ ದಕ್ಷಿಣ ರೈಲು ನಿಲ್ದಾಣ ಮತ್ತು ಜನರು ಗುಂಪುಗಳಾಗಿ ಬರುವ ಸಾಧ್ಯತೆ ಇರುವ ಇತರ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಆರ್‍ಪಿಎಫ್ ಮತ್ತು ಪೋಲೀಸರು ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದಾರೆ. ಪಾಲಕ್ಕಾಡ್ ರೈಲು ನಿಲ್ದಾಣಗಳಲ್ಲಿಯೂ ತಪಾಸಣೆ ನಡೆಸಲಾಗಿದೆ. ಶ್ವಾನ ಬಾಂಬ್ ದಳಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಪಾಲಕ್ಕಾಡ್ ಜಂಕ್ಷನ್ ಮತ್ತು ಶೋರ್ನೂರ್ ನಂತಹ ಪ್ರಮುಖ ನಿಲ್ದಾಣಗಳಲ್ಲಿ ತಪಾಸಣೆ ಮುಂದುವರೆದಿದೆ. ಬಾಂಬ್ ದಳ ಮತ್ತು ಕೆ -9 ದಳವು ಆಲಪ್ಪುಳ ಜಿಲ್ಲೆಯ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries