ಕಣ್ಣೂರು: ಅಂತೂರು ನಗರಸಭೆಗೆ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿಗಳನ್ನು ಸಿಪಿಎಂ ಕಾರ್ಯಕರ್ತರು ಅಪಹರಿಸಿದ್ದಾರೆ ಎಂದು ಕಣ್ಣೂರು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಹೇಳಿದ್ದಾರೆ. ಅಂತೂರು ನಗರಸಭೆಯ ಎರಡು ವಾರ್ಡ್ಗಳಲ್ಲಿ ಎಡ ಅಭ್ಯರ್ಥಿಗಳು ಅವಿರೋಧವಾಗಿÁಯ್ಕೆಯಾಗಿರುವ ಬೆನ್ನಿಗೇ ಈ ಆರೋಪ ಕೇಳಿಬಂದಿದೆ.
ಇಲ್ಲಿ ಅಭ್ಯರ್ಥಿಗಳಾಗಿ ನಾಮನಿರ್ದೇಶನಗೊಂಡವರನ್ನು ಸಿಪಿಎಂ ಕಾರ್ಯಕರ್ತರು ಅಪಹರಿಸಿದ್ದರಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ಸಿಪಿಎಂಗೆ ಸಹಾಯ ಮಾಡುತ್ತಿದ್ದಾರೆ ಎಂದು ಡಿಸಿಸಿ ಅಧ್ಯಕ್ಷರು ಆರೋಪಿಸಿದ್ದಾರೆ.
ಏತನ್ಮಧ್ಯೆ, ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಾಗ, ಕಣ್ಣೂರಿನಲ್ಲಿ ಒಂಬತ್ತು ವಾರ್ಡ್ಗಳಲ್ಲಿ ಎಲ್ಡಿಎಫ್ಗೆ ಯಾವುದೇ ವಿರೋಧವಿರಲಿಲ್ಲ. ಮಲಪಟ್ಟಂ ಪಂಚಾಯತ್ನ ವಾರ್ಡ್ 12 ರಲ್ಲಿ ಯುಡಿಎಫ್ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಲಾಯಿತು.
ಪಂಚಾಯತ್ನ ಇತರ ಎರಡು ವಾರ್ಡ್ಗಳಲ್ಲಿ ಎಡ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. ಕಣ್ಣಾಪುರಂ ಪಂಚಾಯತ್ನ ಮೂರು ಮತ್ತು ಹತ್ತು ವಾರ್ಡ್ಗಳಲ್ಲಿ ಯುಡಿಎಫ್ ಅಭ್ಯರ್ಥಿಗಳ ನಾಮಪತ್ರಗಳನ್ನು ಸಹ ತಿರಸ್ಕರಿಸಲಾಗಿದೆ.




