ಮಲಪ್ಪುರಂ: ಕಾಳಿಕಾವು ಪೋಲೀಸರು ಆರ್ಟಿಐ ಕಾರ್ಯಕರ್ತರ ಸ್ಕೂಟರ್ ಅನ್ನು ವಶಪಡಿಸಿಕೊಂಡಿರುವುದು ಅಪರಾಧ ಮತ್ತು ಅರ್ಜಿದಾರರು ಪರಿಹಾರಕ್ಕೆ ಅರ್ಹರು ಎಂದು ಹೈಕೋರ್ಟ್ ಆದೇಶಿಸಿದೆ. ಕಾಳಿಕಾವು ವೆಂಟೋಟನ್ ವಿರಂಕುಟ್ಟಿ ಅವರ ಸ್ಕೂಟರ್ ಅನ್ನು 2022ರ ಅಕ್ಟೋಬರ್ 17 ರಂದು ಪೋಲೀಸರು ವಶಪಡಿಸಿಕೊಂಡಿದ್ದರು. ಮೊಬೈಲ್ ಪೋನ್ ಬಳಸಿ ಸ್ಕೂಟರ್ ಚಲಾಯಿಸುತ್ತಿದ್ದರು ಎಂಬ ಕಾರಣಕ್ಕೆ ಇನ್ಸ್ಪೆಕ್ಟರ್ ವಾಹನವನ್ನು ನಿಲ್ಲಿಸಿದರು.
ಸ್ಕೂಟರ್ ಅನ್ನು ಆದಷ್ಟು ಬೇಗ ಠಾಣೆಗೆ ಕೊಂಡೊಯ್ಯದಿದ್ದರೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ವೀರಂಕುಟ್ಟಿ ದೂರು ನೀಡಿದ್ದರು. ಠಾಣೆಗೆ ತಂದ ವಾಹನವನ್ನು ನಂತರ ಹಿಂತಿರುಗಿಸಲಾಗಿಲ್ಲ. ದಂಡವನ್ನು ನ್ಯಾಯಾಲಯದಲ್ಲಿ ಪಾವತಿಸಬಹುದು ಎಂಬ ವಾದವನ್ನು ಪೋಲೀಸರು ಪರಿಗಣಿಸಲಿಲ್ಲ, ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಕ್ಕಾಗಿ ನೀಡಲಾದ ರಶೀದಿ ಪೋಲೀಸರಿಗೇ ತಲೆನೋವಾಗಿ ಪರಿಣಮಿಸಿತು. ವಾಹನವನ್ನು ವಶಪಡಿಸಿಕೊಂಡ ಕಾರಣ ಮತ್ತು ಕಾನೂನಿನ ಅಡಿಯಲ್ಲಿರುವ ಸೆಕ್ಷನ್ ಅನ್ನು ತೋರಿಸಲಾಗಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಆರ್ಟಿಐ ಕಾರ್ಯಕರ್ತ ರಶೀದಿಯೊಂದಿಗೆ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಹಣ ಪಾವತಿಸಬೇಕಾದ ಸ್ಥಳದಿಂದ ವಾಹನವನ್ನು ವಶಪಡಿಸಿಕೊಂಡಿಲ್ಲ ಮತ್ತು ಪೋಲೀಸರು ವಾಹನವನ್ನು ವಶಪಡಿಸಿಕೊಳ್ಳಲು ಕಾನೂನು ವಿಧಾನಗಳನ್ನು ಅನುಸರಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ದಾಖಲೆಗಳ ಕೊರತೆ ಮತ್ತು ಮೊಬೈಲ್ ಪೋನ್ ಬಳಕೆಯಂತಹ ಅಪರಾಧಗಳಿಗೆ ವಾಹನವನ್ನು ವಶಪಡಿಸಿಕೊಳ್ಳದಂತೆ ಡಿಜಿಪಿ ಅವರ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ ಪೆÇಲೀಸ್ ಕ್ರಮ ಕೈಗೊಂಡಿದ್ದರು.
ನ್ಯಾಯಾಲಯವು ಇದನ್ನು ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಿದೆ.
ಪ್ರಕರಣವನ್ನು ದಾಖಲಿಸದೆ ಅರ್ಜಿದಾರರ ವಾಹನವನ್ನು ವಶಪಡಿಸಿಕೊಳ್ಳುವುದು ಮತ್ತು ಬಂಧಿಸುವುದು ಕಾನೂನುಬಾಹಿರ ಕೃತ್ಯವೆಂದು ನ್ಯಾಯಾಲಯವು ಬೊಟ್ಟುಮಾಡಿದೆ. ಅರ್ಜಿದಾರರು ವಾಹನವನ್ನು 'ಸುರಕ್ಷತೆಗಾಗಿ ಹಸ್ತಾಂತರಿಸಿದ್ದಾರೆ' ಎಂಬ ಪೋಲೀಸರ ವಾದವು ನ್ಯಾಯಾಲಯದಲ್ಲಿ ಸಲ್ಲಿಸಲಾದ ರಶೀದಿ ಮತ್ತು ಮ್ಯಾಜಿಸ್ಟ್ರೇಟ್ ವರದಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಗಮನಸೆಳೆದಿದೆ. ಪರಿಹಾರವನ್ನು ಕೋರಿ ಅರ್ಜಿದಾರರ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು. ಆದಾಗ್ಯೂ, ಮೊತ್ತವನ್ನು ನಿರ್ಧರಿಸಲು ಹೆಚ್ಚಿನ ಪುರಾವೆಗಳು ಮತ್ತು ವಿಚಾರಣೆ ಅಗತ್ಯವಿರುವುದರಿಂದ ಸಾಮಾನ್ಯ ಕಾನೂನು ಪರಿಹಾರವನ್ನು ಅಳವಡಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಲಾಯಿತು.




