HEALTH TIPS

ಪೆಡಾಲ ಸನ್ನಿಧಿ: ಲೋಗೋ ಸ್ಪರ್ಧೆಯ ಫಲಿತಾಂಶ ಪ್ರಕಟ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಬಳಸಿಕೊಳ್ಳಲು ಬ್ರಹ್ಮಕಲಶೋತ್ಸ ಸಮಿತಿ ಹಾಗೂ ಪ್ರಚಾರ ಸಮಿತಿಯ ನೇತೃತ್ವದಲ್ಲಿ ನಡೆಸಲಾದ ಲಾಂಛನ(ಲೋಗೋ) ರಚನಾ ಸ್ಪರ್ಧೆಯಲ್ಲಿ ಬದಿಯಡ್ಕದ ದೀಕ್ಷಿತ್ ಅವರ ರಚನೆಯು ಆಯ್ಕೆಯಾಗಿದೆ. 

ಇವರು ಎಸ್.ಟಿ. ಪ್ರಮೋಟರ್ ಆಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ಟಾಂಡ್ ಔಟ್ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ  ತಮ್ಮ ಹವ್ಯಾಸವನ್ನೂ ಮುಂದುವರಿಸುತ್ತಿದ್ದಾರೆ. ಸ್ಪರ್ಧೆಯ ತೀರ್ಪುಗಾರರಾಗಿ ಬಾಲಸುಬ್ರಮಣ್ಯ ಬೊಳುಂಬು, ರಾಜೇಶ್ ಬದಿಯಡ್ಕ ಹಾಗೂ ಶ್ಯಾಮ ಪ್ರಸಾದ್ ಸರಳಿ ಸಹಕರಿಸಿದ್ದರು. 

ಸದ್ಯದಲ್ಲೇ ಲಾಂಛನ/ಲೋಗೋ ಬಿಡುಗಡೆ ನಡೆಯಲಿದೆ. ಬಹುಮಾನಿತರಿಗೆ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಗಣ್ಯರಿಂದ ಸೂಕ್ತ ಗೌರವ, ಬಹುಮಾನವನ್ನು ನೀಡಲಾಗುವುದು. ಅಲ್ಲದೆ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ಪ್ರೋತ್ಸಾಹಕ ಪ್ರಮಾಣಪತ್ರ ನೀಡಲಾಗುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries