HEALTH TIPS

ಪಾರೆಕಟ್ಟದಲ್ಲಿ ಅತ್ಯಾಧುನಿಕ ಅನಿಲ ಚಿತಾಗಾರದ ಉದ್ಘಾಟನೆ

ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲು ಪಾರೆಕಟ್ಟದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಅನಿಲಚಾಲಿತ ಚಿತಾಗಾರದ ಉದ್ಘಾಟನೆ ನೆರವೇರಿತು.  ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಉದ್ಘಾಟಿಸಿದರು.

ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸುರ್ಲು, ಯಶೋದಾ ಎಸ್.ನಾಯ್ಕ್, ಉಮೇಶ್ ಗಟ್ಟಿ, ಕಾಸರಗೋಡುಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಶ್ರೀಮತಿ, ನಜೀರ, ಸಿ.ಉದಯ ಕುಮಾರ್, ಎಂ.ಜಲೀಲ್, ಹಬೀಬ್ ಚೆಟ್ಟುಂಗುಯಿ,  ಟಿ.ಕೆ. ಜನನಿ, ಕೆ.ರತೀಶ್, ಸಿ.ಎಚ್ ಉದಯಕುಮಾರ್, ನಗರಸಭಾ ಸದಸ್ಯರಾದ ಸವಿತಾ ಟೀಚರ್, ಪಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಮೊದಲಾದವರು  ಉಪಸ್ಥಿತರಿದ್ದರು. ವಾರ್ಡ್ ಸದಸ್ಯೆ ಸ್ಮಿತಾ ಸುಧಾಕರನ್ ಸ್ವಾಗತಿಸಿದರು.  ಪಂಚಾಯಿತಿ ಕಾರ್ಯದರ್ಶಿ ನೀತು ಶಿಜಿಮೋನ್  ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries