ಬದಿಯಡ್ಕ: ನೀರ್ಚಾಲು ಶ್ರೀಕುಮಾರಸ್ವಾಮಿ ಭಜನಾ ಮಂದಿರದ 51ನೇ ವಾರ್ಷಿಕೋತ್ಸವ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ 6.30ಕ್ಕೆ ಗಣಪತಿ ಹವನದ ಬಳಿಕ ಧ್ವಜಾರೋಹಣ ನಡೆಯಿತು. ಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ, ಮೊದಲಾದವರು ನೇತೃತ್ವ ವಹಿಸಿದ್ದರು. ಪುರೋಹಿತರಾದ ಬ್ರಹ್ಮಶ್ರೀ ಪ್ರವೀಣ ಹಳೆಮನೆ ವಿಧಿವಿಧಾನ ನಿರ್ವಹಿಸಿದರು. 9.30 ರಿಂದ 12.30ರ ವರೆಗೆ ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಅಪರಾಹ್ನ 2 ರಿಂದ 6ರ ವರೆಗೆ ವಿವಿಧ ಭಜನಾ ತಮಡಗಳಿಂದ ಭಜನೆ, ಬಳಿಕ ದೀಪ ಪ್ರತಿಷ್ಠೆ, ಭಜನೆ, ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಸಮಾಪ್ತಿಗೊಂಡಿತು.



.jpg)
.jpg)
