ಕುಂಬಳೆ: ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರವನ್ನು ಪ್ರಾರಂಭಿಸಲು ಲೀಗ್ ನಾಯಕ 50 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅರಿಕ್ಕಾಡಿ ಕುನ್ನುವಿನ ದಿ. ಎ. ಮೊಯ್ದೀನ್ ಕುಂಞÂ್ಞ(ಮೋನು) ಅವರ ಪತ್ನಿ ಸಫಿಯಾ ಅವರು, ಕುಂಬಳೆ ಪಂಚಾಯತಿ ಬಂಬ್ರಾಣ 4 ನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಎಂಪಿ ಖಾಲಿದ್ ವಿರುದ್ಧ ವಂಚನಾ ಆರೋಪ ಹೊರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಂಬೈನಲ್ಲಿ ತನ್ನ ವ್ಯವಹಾರವನ್ನು ಕೊನೆಗೊಳಿಸಿದ ನಂತರ, ಖಾಲಿದ್ ತನ್ನ ಪತಿಯನ್ನು ಬೆಂಗಳೂರಿನ ಹೋಟೆಲ್ ಪಾಮ್ ಸೂಟ್ಸ್ ಎಂಬ ಕಂಪನಿಯಲ್ಲಿ 25,43000 ರೂ.ಗಳಿಗೆ ಪಾಲುದಾರನನ್ನಾಗಿ ಮಾಡಿಕೊಂಡರು. ಏಪ್ರಿಲ್ 2017 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಖಾಲಿದ್ ಅವರು 32.09 ಶೇ. ಪಾಲನ್ನು ಹೊಂದಿದ್ದಾರೆಂದು ದಾಖಲಿಸಿದ್ದರು. ಪಾಂಡಿಚೇರಿಯಲ್ಲಿ ಮತ್ತೊಂದು ವ್ಯವಹಾರದ ಹೆಸರಿನಲ್ಲಿ 20 ಲಕ್ಷಗಳನ್ನು ಹೆಚ್ಚುವರಿಯಾಗಿ ಬಳಿಕ ಪಡೆದರು. ನಂತರ, ತನ್ನ ಪತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಮತ್ತು ನಂತರ ನಿಧನರಾದರು. ಕುಟುಂಬದ ಏಕೈಕ ಆಧಾರವಾಗಿದ್ದ ನಮ್ಮ ಪತಿಯ ನಷ್ಟವನ್ನು ಭರಿಸಲು ನಾವು ಹೆಣಗಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ಮಕ್ಕಳ ಅಧ್ಯಯನ ಮತ್ತು ಭವಿಷ್ಯದ ಜೀವನ ಅಸ್ತವ್ಯಸ್ತವಾಗಿದೆ. ನಾವು ನಿರಂತರವಾಗಿ ಕೇಳಿದಾಗ, ಎಂಟು ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು. ದೂರು ದಾಖಲಿಸಿದ ನಂತರ, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.
ಕೇವಲ 16,000 ರೂ.ಗಳನ್ನು ಮೂರು ಬಾರಿ ಮರು ಪಾವತಿಸಲಾಗಿದೆ. ಬಳಿಕ ಅವರು ಅಂಕಿಅಂಶಗಳನ್ನು ಪರಿಶೀಲಿಸಲು ಅಥವಾ ಆದಾಯದ ಪಾಲು ನೀಡಲು ಸಿದ್ಧರಾಗಿಲ್ಲ. 2024 ಲೀಗ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಸಹಿತ ಅನೇಕ ಜನರಿಗೆ ದೂರು ನೀಡಿದ್ದೇವೆ. ಖಾಲಿದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ, ಒಂದು ವರ್ಷ ಕಳೆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ವಂಚನೆ ಮತ್ತು ಹಗರಣದ ಬಲಿಪಶುವಾಗಿ ತಾವು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇವೆ. ನ್ಯಾಯ ಒದಗಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಣ ಹಿಂದಿರುಗಿಸುವವರೆಗೆ ಖಾಲಿದ್ ಅವರ ಮನೆಯ ಮುಂದೆ ಟೆಂಟ್ ನಿರ್ಮಿಸಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಅವರ ಮಕ್ಕಳಾದ ಜಫ್ರಿದಾ ಮತ್ತು ಜಮ್ಶೀದಾ ಭಾಗವಹಿಸಿದ್ದರು.

.jpg)
