HEALTH TIPS

ರಾಹುಲ್ ಬಂಧನವಾದರೆ ಹಸಿವಿನಿಂದ ಬಳಲಬೇಕಾಗಿಲ್ಲ: ಹಾಜರುಪಡಿಸಿದಾಗ ರಾತ್ರಿಯ ಊಟ ಒದಗಿಸುವುದಾಗಿ ಡಿವೈಎಫ್‍ಐ

ಕಾಂಞಂಗಾಡ್: ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಮಾಂಕೂಟತ್ತಿಲ್ ಬಂಧನವಾದರೆ, ಇಂದು(ನಿನ್ನೆ ರಾತ್ರಿ) ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಾತ್ರಿಗೆ ಊಟ ಒದಗಿಸಲಾಗುವುದು ಎಂದು ಡಿವೈಎಫ್‍ಐ ನಾಯಕರು ಹೇಳಿದ್ದಾರೆ.

ಹೊಸದುರ್ಗ ನ್ಯಾಯಾಲಯದ ಮುಂದೆ ಜಮಾಯಿಸಿದ ಡಿವೈಎಫ್‍ಐ ಕಾರ್ಯಕರ್ತರು, ರಾಹುಲ್ ಆಸ್ಪತ್ರೆಯಲ್ಲಿ ತಮ್ಮ ಆಹಾರ ವಿತರಣೆಯನ್ನು ಈ ಹಿಂದೆ ಅವಮಾನಿಸಿದ್ದರು ಮತ್ತು ಇಂದಿನ ಆಹಾರ ವಿತರಣೆಯು ಅದಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.

'ಡಿವೈಎಫ್‍ಐನ ಹೃದಯಪೂವರ್ಂ ಯೋಜನೆಯನ್ನು ಅವಮಾನಿಸಿದ ರಾಹುಲ್ ಅವರನ್ನು ಇಂದು ಬಂಧಿಸಿ ರಾತ್ರಿ ಜೈಲಿಗೆ ಕರೆದೊಯ್ದರೆ, ಅಲ್ಲಿ ಊಟಕ್ಕೆ ಸಮಯವಿರುತ್ತದೆ. ನಂತರ ನಾವು ಅವರಿಗೆ ರಾತ್ರಿಗೆ ಊಟ ಒದಗಿಸುತ್ತೇವೆ. ಇದು ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಕೊಡುಗೆಗೆ ಅವರಾಡಿದ್ದಕ್ಕೆ ನೀಡುವ ಉತ್ತರವಾಗಿದೆ. "ನಾವು ದಿನಕ್ಕೆ ಸುಮಾರು 47,000 ಪ್ಯಾಕೆಟ್ ಆಹಾರವನ್ನು ವಿತರಿಸುತ್ತಿದ್ದೇವೆ. ಅದನ್ನೇ ರಾಹುಲ್ ಅನೈತಿಕ ಎಂದು ಕರೆದು ಅವಮಾನಿಸಿದ್ದರು. ಅದನ್ನು ಪ್ರತಿಭಟಿಸಿ ನಾವು ಆಹಾರ ಪ್ಯಾಕೆಟ್‍ಗಳನ್ನು ನೀಡುತ್ತಿದ್ದೇವೆ. ಇಂದು ರಾಹುಲ್ ಹಸಿವಿನಿಂದ ಬಳಲಬೇಕಾಗಿಲ್ಲ" ಎಂದು ಕಾರ್ಯಕರ್ತರು ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries