ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ರಾಜಗೋಪಾಲನ್ ರಾಜ್ಯ ಪಿಡಬ್ಲ್ಯೂಡಿ ಖಾತೆ ಸಚವ ಪಿ.ಎ ಮಹಮ್ಮದ್ ರಿಯಾಸ್ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
ತಲಪ್ಪಾಡಿ-ಚೆಂಗಳ ರೀಚ್ನಲ್ಲಿ ಷಟಪಥ ನಿರ್ಮಾಣಕಾರ್ಯ ಬಹುತೇಕ ಪೂರ್ತಿಗೊಂಡಿದ್ದು, ಕೆಲಸ ಬಾಕಿಯಿರುವ ಕಡೆ ಯಾವುದೇ ಮಾನದಂಡ ಪಾಲಿಸದೆವಾಹನಗಳು ಅತಿಯಾದ ವೇಗದಲ್ಲಿಸಂಚರಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಕಾಮಗಾರಿಪೂರ್ತಿಗೊಳಿಸಿ, ತಾತ್ಕಾಲಿಕವಾಗಿ ತೆರೆದುಕೊಡಲಾಗಿರುವ ಪ್ರದೇಶದಲ್ಲಿಕಡ್ಡಾಯವಾಗಿ ಸಾರಿಗೆ ನಿಯಂತ್ರಣ ಏರ್ಪಡಿಸಿ ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸಬೇಕು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡುವಂತೆಯೂ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

