HEALTH TIPS

ಇಂಡೊನೇಷ್ಯಾದಲ್ಲಿ ಪ್ರವಾಹ: ನೀರು, ಆಹಾರಕ್ಕಾಗಿ ಲೂಟಿ

ಮೆಡಾನ್‌: ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಲೂಟಿಕೋರರು ಆಹಾರ, ಔಷಧ ಮತ್ತು ಅನಿಲವನ್ನು ಪಡೆಯಲು ಶಿಥಿಲಗೊಂಡ ಬ್ಯಾರಿಕೇಡ್‌ಗಳು, ಪ್ರವಾಹಪೀಡಿತ ರಸ್ತೆಗಳು ಮತ್ತು ಒಡೆದು ಹೋದ ಗಾಜುಗಳನ್ನು ದಾಟಿ ಹೋಗುತ್ತಿದ್ದಾರೆ.

ಪ್ರವಾಹದಲ್ಲಿ ಹಾನಿಗೊಳಗಾದ ಅಂಗಡಿಗಳಲ್ಲಿ ವಸ್ತುಗಳನ್ನು ಲೂಟಿ ಮಾಡುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಉತ್ತರ ಸುಮಾತ್ರಾ ಪೊಲೀಸರು ಶನಿವಾರ ಸಂಜೆ ಮೊದಲ ಕಳ್ಳತನ ಪ್ರಕರಣವನ್ನು ವರದಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

'ಲೂಟಿಕೋರರು ನೆರವು ಸಿಗುವುದಕ್ಕಿಂತ ಮೊದಲು ಕಳ್ಳತನ ಮಾಡಿದ್ದಾರೆ. ಅಗತ್ಯ ವಸ್ತುಗಳು ದೊರೆಯುತ್ತವೆ ಎಂದು ಅವರಿಗೆ ತಿಳಿದಿರಲಿಲ್ಲ. ಹಸಿವಿನಿಂದ ಸಾಯುತ್ತೇವೆ ಎಂದು ಭಾವಿಸಿ, ಈ ಕೃತ್ಯವನ್ನು ಎಸಗಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ 303 ಜನರ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries