HEALTH TIPS

ಬಿರಿಕುಲಂನ ಪೆÇೀಟ್ಟಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕಳಿಯಾಟ್ಟ ಮಹೋತ್ಸವ-ಅಡಕೆಮರ ಕಡಿಯುವ ಮುಹೂರ್ತ

ಕಾಸರಗೋಡು: ಬಿರಿಕುಲಂನ ಪೆÇಟ್ಟಡ್ಕದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ್ಟ ಮಹೋತ್ಸವ 2026 ಜನವರಿ 30, 31 ಮತ್ತು ಫೆಬ್ರವರಿ 1 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ  ಪೆÇೀಟೊಡುಕ್ಕುತಮ್ಮನ ವಳರ್‍ಮುಡಿ ನಿರ್ಮಾಣಕ್ಕಿರುವ ಅಡಕೆಮರ ಕಡಿಯುವ ಮುಹೂರ್ತ ನೆರವೇರಿತು. ಕೆ.ಕೃಷ್ಣನ್ ಆಚಾರ್ಯ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಡಕೆ ಮರ ಕಡಿಯುವ ಮುಹೂರ್ತ ನೆರವೇರಿಸಿದರು.  ನಂತರ ಕಡಿದ ಮರವನ್ನು ಸಂಗೀತ ವಾದ್ಯಘೋಷದ ಜತೆಗೆ  ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಜನವರಿ 30 ರಂದು ಸಂಜೆ 6.30 ಕ್ಕೆ ಉದ್ಘಾಟನಾ ಸಮಾರಂಭ, ನಂತರ ದೀಪಾರಾಧನೆ ನಡೆಯಲಿದೆ. ಸಂಜೆ 7ಕ್ಕೆ ಕಳಿಯಾಟಕ್ಕೆ ಚಾಲನೆ ನೀಡಲಾಗುವುದು. 

31 ರಂದು, ಬೆಳಿಗ್ಗೆ ವಿಷ್ಣು ಮೂರ್ತಿ, ಮಧ್ಯಾಹ್ನ ಚಾಮುಂಡೇಶ್ವರಿ ಮತ್ತು ಗುಳಿಗ ದೈವದ ನರ್ತನ ಸೇವೆ ನಡೆಯುವುದು. ಸಂಜೆ ವಟ್ಟಕ್ಕಯಂ ಕಾವಿಲ್‍ನಲ್ಲಿ ದೀಪಾರಾಧನೆ, ಪೋಟ್ಟಡ್ಕತ್ತಮ್ಮನ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ತೋಟ್ಟಂಪಾಟ್,  ವಟ್ಟಕ್ಕಯಂ ಕಾವಿಲ್‍ನಿಂದ ವೀರನ್ ತೆಯ್ಯಂ, ಭೈರವನ್ ತೆಯ್ಯಂನೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ.ಫೆ.1ರಂದು ವಿಷ್ಣುಮೂರ್ತಿ, ಪೆÇೀಟ್ಟಡ್ಕಕ್ಕತಮ್ಮ, ಗುಳಿಗ ದೈವಗಳ ನಿರ್ಗಮನ, ಚಾಮುಂಡೇಶ್ವರಿ ಪೆÇೀಟ್ಟಡ್ಕತ್ತ್ ಹಾಗೂ ವಟ್ಟಕ್ಕಾಯತ್  ಚಾಮುಂಡೇಶ್ವರಿ ವಟ್ಟ ದ್ಯವಗಳ ಭೇಟಿನಡೆಯುವುದು.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries