ಸಮರಸ ಚಿತ್ರಸುದ್ದಿ: ಬದಿಯಡ್ಕ: ತ್ರಿಶೂರ್ನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಶಾಸ್ತ್ರೀಯ ಸಂಗೀತ, ವಯಲಿನ್ ಓರಿಯಂಟಲ್, ಕನ್ನಡ ಕಂಠಪಾಠಗಳಲ್ಲಿ ಎ ಗ್ರೇಡಿನೊಂದಿಗೆ ವಿಜೇತಳಾದ ಎಸ್ಎಪಿಎಚ್ಎಸ್ಎಸ್ ಅಗಲ್ಪಾಡಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಅನ್ವಿತಾ ತಲ್ಪಣಾಜೆ. ಈಕೆ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಹಾಗೂ ಸೀನಿಯರ್ ಹಂತಗಳನ್ನು ವಿದುಷಿ ಗೀತಾ ಸಾರಡ್ಕ ಅವರ ಬಳಿ ಕಲಿತು ಪ್ರಸ್ತುತ ಡಾ.ಅನೀಶ್ ವಿ ಭಟ್ ಪುತ್ತೂರು ಹಾಗೂ ವಯಲಿನ್ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಇವರ ಶಿಷ್ಯೆಯಾಗಿರುತ್ತಾಳೆ. ಈಕೆ ಶಿವಶಂಕರ ಭಟ್ ತಲ್ಪಣಾಜೆ ಹಾಗೂ ಸುಧಾವಾಣಿ ಇವರ ಪುತ್ರಿ.

-%20Anvitha.jpg)
