HEALTH TIPS

'ವಿಶೇಷ ಚೇತನರ ಕಾರ್ನಿವಲ್'-ವಿಕಲಚೇತನ ಕಲಾವಿದರಿಂದ ಅರ್ಜಿ ಆಹ್ವಾನ

ಕಾಸರಗೋಡು: ರಾಜ್ಯದಲ್ಲಿ ವಿಕಲಚೇತನ ಸಮುದಾಯದ ಸಬಲೀಕರಣ ಮತ್ತು ಸಾಮಾಜಿಕ ಸೇರ್ಪಡೆಯ ಗುರಿಯೊಂದಿಗೆ, ಸಾಮಾಜಿಕ ನ್ಯಾಯ ಇಲಾಖೆಯು ಜನವರಿ 19 ರಿಂದ 21 ರವರೆಗೆ ತಿರುವನಂತಪುರದಲ್ಲಿ 'ವಿಶೇಷಚೇತನರ ಕಾರ್ನಿವಲ್' ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿದೆ.

ಅಂಗವಿಕಲ ಸೃಜನಶೀಲತೆ ಉತ್ಸವ ಆಯೋಜಿಸುವುದು, ಅಂಗವಿಕಲ ವಲಯದಲ್ಲಿ ಸಮಗ್ರ ಚಟುವಟಿಕೆ, ದೇಶಕ್ಕೆ ಮಾದರಿಯಾಗಬಹುದಾದ ಯೋಜನೆಗಳು, ಈ ವಲಯದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನಗಳು ಮತ್ತು ಸಹಾಯಕ ತಂತ್ರಜ್ಞಾನ ಪ್ರದರ್ಶನ, ಕಲೆ ಮತ್ತು ಕ್ರೀಡಾ ಕಾರ್ಯಕ್ರಮಗಳು, ಉದ್ಯೋಗ ಮೇಳ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಮತ್ತು ಸಮಗ್ರ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದೆ.

ತಿರುವನಂತಪುರದಲ್ಲಿ ನಡೆಯಲಿರುವ 'ಪ್ರತಿಭಾ ಉತ್ಸವ'ದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸುವ ಕಲಾ ಪ್ರದರ್ಶನಗಳನ್ನು ಪ್ರಸ್ತುತಪಡಿಸಲು ಆಸಕ್ತಿ ಹೊಂದಿರುವ ವಿಕಲಚೇತನ ಕಲಾವಿದರಿಂದ ಅರ್ಜಿ  ಆಹ್ವಾನಿಸಲಾಗಿದೆ. ಸಾರ್ವಜನಿಕ ಶಾಲೆಗಳು, ಕಾಲೇಜುಗಳು, ವಿಶೇಷ ಶಾಲೆಗಳು, ವಸತಿ ಶಾಲೆಗಳು, ಪುನರ್ವಸತಿ ಕೇಂದ್ರ, ವೃತ್ತಿಪರ ತರಬೇತಿ ಕೇಂದ್ರಗಳು ಮುಂತಾದ ಸಂಸ್ಥೆಗಳಲ್ಲಿರುವ ಎಲ್ಲಾ ವರ್ಗಗಳ ಅಂಗವಿಕಲ ವ್ಯಕ್ತಿಗಳಿಗೆ.ಅರ್ಜಿಗಳು ತೆರೆದಿರುತ್ತವೆ. ಅರ್ಜಿಗಳನ್ನು ಜಿಲ್ಲಾ ಸಾಮಾಜಿಕ ನ್ಯಾಯ ಕಚೇರಿಯು ಸಿದ್ಧಪಡಿಸಿದ ಗೂಗಲ್ ಫಾರ್ಮ್ ಮೂಲಕ ಜನವರಿ 7 ರೊಳಗೆ ಸಲ್ಲಿಸಬೇಕು. ಅರ್ಜಿದಾರರು ತಾವು ಪ್ರಸ್ತುತಪಡಿಸುವ ಕಲಾ ಪ್ರಕಾರದ ಕನಿಷ್ಠ 3 ನಿಮಿಷಗಳ ಪ್ರದರ್ಶನವನ್ನು ಪ್ರಸ್ತುತಪಡಿಸಬೇಕು. ಪೂರ್ಣ ವೇಷ ಭೂಷಣವಿರುವ ವಿಡಿಯೊ, ಸ್ಪರ್ಧಿಗಳ ಅಂಗವೈಕಲ್ಯ ಮತ್ತು ವಯಸ್ಸನ್ನು ಸಾಬೀತುಪಡಿಸುವ ಪ್ರಮಾಣಪತ್ರದೊಂದಿಗೆ ಜಿಲ್ಲಾ ಕಚೇರಿಗೆ ಖುದ್ದಾಗಿ ಅಥವಾ talentfestksd@gmail.com  ಗೆ ಇಮೇಲ್ ಮೂಲಕ ಸಲ್ಲಿಸಬೇಕು ಎಂದುಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries