HEALTH TIPS

ಮಣಿಪುರ| ಸುಲಿಗೆಯಲ್ಲಿ ಭಾಗಿ ಆರೋಪ: ನಾಲ್ವರು ಬಂಡುಕೋರರ ಬಂಧನ

ಇಂಫಾಲ್: ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮಣಿಪುರದಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಬಂಡುಕೋರರನ್ನು ಭದ್ರತಾ ಪಡೆಗಳನ್ನು ಬಂಧಿಸಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ಕಾಂಗ್‌ಪೋಕ್ಪಿ ಮತ್ತು ಚುರಾಚಾಂದ್‌ಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸುಮಾರು 65 ಎಕರೆಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಸಗಸೆಯನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ತೇರಾ ಲೌಕ್ರಕ್ಪಮ್ ಪ್ರದೇಶದಲ್ಲಿ ನಿಷೇಧಿತ ಪೀಪಲ್ಸ್‌ ಲಿಬರೇಶನ್ ಆರ್ಮಿಯ ಕಾರ್ಯಕರ್ತೆಯನ್ನು ಶುಕ್ರವಾರ ಬಂಧಿಸಲಾಗಿದ್ದು, ಅವರಿಂದ ₹1 ಲಕ್ಷ 'ಸುಲಿಗೆ ಹಣ'ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ಬಿಷ್ಣುಪುರ ಜಿಲ್ಲೆಯ ಫೊಯಿಜಿಂಗ್ ತೇರಾ ಮಖೋಂಗ್‌ನಲ್ಲಿ ನಿಷೇಧಿತ ಪ್ರಿಪಕ್ (ಪ್ರೋ) ಸದಸ್ಯನ್ನು ಬಂಧಿಸಲಾಗಿದೆ. ಅದೇ ಸಂಘಟನೆಯ ಮತ್ತೊಬ್ಬ ಸಕ್ರಿಯ ಸದಸ್ಯನನ್ನು ಶುಕ್ರವಾರ ಬಂಧಿಸಲಾಗಿದೆ.

ನಿಷೇಧಿತ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ (ತೈಬಂಗನ್ಬಾ)ದ ಕಾರ್ಯಕರ್ತನನ್ನು ಗುರುವಾರ ಬಿಷ್ಣುಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries