ಪೆರ್ಲ: ಪೆರ್ಲ ನಾಲಂದ ಕಾಲೇಜ್ ಆಫ್ ಆಟ್ರ್ಸ್-ಸಯನ್ಸ್ ಇವರ ವತಿಯಿಂದ ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ಶಿಬಿರವು ಫೆ.14 ರಂದು ಶನಿವಾರ ಬೆಳಗ್ಗೆ 10 ರಿಂದ ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆಯಲಿದೆ. ತಜ್ಞರಾದ ಹರಿಗೋವಿಂದ್ ಮತ್ತು ಕೆ.ವಿ.ಜಯರಾಜನ್ ಮಾಸ್ತರ್ ತರಗತಿಗಳನ್ನು ನಡೆಸಿಕೊಟಲಿದ್ದಾರೆ. ತರಗತಿಯಲ್ಲಿ ಭಾಗವಹಿಸಿದವರಿಗೆ ಜ್ಞಾನ, ಶಿಸ್ತು ಮತ್ತು ಸಂಕಲ್ಪದಿಂದೊಡಗೂಡಿದ ನಾಗರಿಕ ಸೇವಾ ಪದವಿಯನ್ನು ಪಡೆಯಲು ಅನುಕೂಲವಾಗಲಿದೆ. ಸ್ವಾಭಿಮಾನದಿಂದೊಡಗೂಡಿದ ಅತ್ಯುತ್ತಮ ದೇಶಸೇವೆ ಮಾಡುವ ಮಹತ್ಕಾರ್ಯಕ್ಕೆ ಮೊದಲ ಹೆಜ್ಜೆಯಾಗಿ ಆಸಕ್ತರು ಭಾಗವಹಿಸಬಹುದು. ಹತ್ತನೇ ತರಗತಿಯಿಂದ ಪದವಿ ಶಿಕ್ಷಣ ಪಡೆಯುತ್ತಿರುವವರು, ಆಸಕ್ತರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

