ಇದು ಭಾರತದ ಮೊದಲ ಮತ್ತು ವಿಶ್ವದ ಎರಡನೇ ನೀರಿನಾಳದಲ್ಲಿಯ ರಸ್ತೆ-ರೈಲು ಸುರಂಗವಾಗಲಿದೆ.
ಪ್ರಸ್ತುತ ರಾ.ಹೆ.715ರಲ್ಲಿನ ನುಮಾಲಿಗಡ ಮತ್ತು ರಾ.ಹೆ.15ರಲ್ಲಿಯ ಗೋಹಪುರ ನಡುವೆ 240 ಕಿ.ಮೀ.ಅಂತರವಿದೆ. ಈ ಮಾರ್ಗವು ರಾ.ಹೆ.52ರಲ್ಲಿಯ ಸಿಲ್ಘಾಟ್ ಸಮೀಪದ ಕಾಲಿಯಾಭಂಭೋರಾ ಮೂಲಕ ಹಾದು ಹೋಗುತ್ತಿದ್ದು,ಪ್ರಯಾಣವು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಸುರಂಗವನ್ನು ವಿನ್ಯಾಸ-ಸಾಮಗ್ರಿಗಳ ಖರೀದಿ-ನಿರ್ಮಾಣ (ಇಪಿಸಿ) ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತಿಳಿಸಿದೆ.
ಯೋಜನೆಯು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಸರಕು ಸಾಗಣೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲಾಜಿಸ್ಟಿಕ್ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

