HEALTH TIPS

18,662ಕೋಟಿ ರೂ.ವೆಚ್ಚದಲ್ಲಿ ಮೊದಲ ನೀರಿನಾಳದ ರಸ್ತೆ-ರೈಲು ಸುರಂಗವನ್ನು ನಿರ್ಮಿಸಲಿರುವ ಭಾರತ

ನವದೆಹಲಿ: 18,662 ಕೋ.ರೂ.ಗಳ ವೆಚ್ಚದಲ್ಲಿ ಅಸ್ಸಾಮಿನಲ್ಲಿ ಬ್ರಹ್ಮಪುತ್ರಾ ನದಿಯ ಅಡಿಯಲ್ಲಿ ಗೋಹಪುರ ಮತ್ತು ನುಮಾಲಿಗಡ ನಡುವೆ ಪ್ರವೇಶ ನಿಯಂತ್ರಿತ ಚತುಷ್ಪಥ ಗ್ರೀನ್ಫೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಶನಿವಾರ ಅನುಮೋದನೆ ನೀಡಿದೆ.

ಇದು ಭಾರತದ ಮೊದಲ ಮತ್ತು ವಿಶ್ವದ ಎರಡನೇ ನೀರಿನಾಳದಲ್ಲಿಯ ರಸ್ತೆ-ರೈಲು ಸುರಂಗವಾಗಲಿದೆ.

ಪ್ರಸ್ತುತ ರಾ.ಹೆ.715ರಲ್ಲಿನ ನುಮಾಲಿಗಡ ಮತ್ತು ರಾ.ಹೆ.15ರಲ್ಲಿಯ ಗೋಹಪುರ ನಡುವೆ 240 ಕಿ.ಮೀ.ಅಂತರವಿದೆ. ಈ ಮಾರ್ಗವು ರಾ.ಹೆ.52ರಲ್ಲಿಯ ಸಿಲ್ಘಾಟ್ ಸಮೀಪದ ಕಾಲಿಯಾಭಂಭೋರಾ ಮೂಲಕ ಹಾದು ಹೋಗುತ್ತಿದ್ದು,ಪ್ರಯಾಣವು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಸುರಂಗವನ್ನು ವಿನ್ಯಾಸ-ಸಾಮಗ್ರಿಗಳ ಖರೀದಿ-ನಿರ್ಮಾಣ (ಇಪಿಸಿ) ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತಿಳಿಸಿದೆ.

ಯೋಜನೆಯು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಸರಕು ಸಾಗಣೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲಾಜಿಸ್ಟಿಕ್ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries