ಅಮರಾವತಿ: ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ಶಂಕಿತ ಕಲಬೆರಕೆ ಹಾಲು ಸೇವನೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಲಛೆರುವು ಗ್ರಾಮದ ಅಂಗಡಿಯೊಂದರಲ್ಲಿ ಹಾಲು ಖರೀದಿಸಿದ ಹಲವು ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿತ್ತು.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಾಲು ಕಲಬೆರಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.
ಫೆಬ್ರವರಿ 16ರಿಂದ ಮಾರ್ಚ್ 21ರವರೆಗೆ ಒಟ್ಟು 20 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 16 ಜನರು ಮೃತಪಟ್ಟಿದ್ದಾರೆ, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಒಬ್ಬರು ಚೇತರಿಸಿಕೊಂಡಿದ್ದಾರೆ.
ಚೈತ್ರ ನವರಾತ್ರಿಯ ಪ್ರಯುಕ್ತ ಮಾತಾ ವೈಷ್ಣೋದೇವಿ ಬಳಿ ಜನದಟ್ಟಣೆ; ಯಾತ್ರೆ ಸ್ಥಗಿತ .ಹೊರ್ಮುಜ್ ಬಂದ್: ಯೂರಿಯಾ, ಡಿಎಪಿ ಸೇರಿ ಭಾರತಕ್ಕೆ ರಸಗೊಬ್ಬರ ಪೂರೈಕೆಗೆ ಹೊಡೆತ
'ಮೃತರಾದ 16 ಮಂದಿ ಕೂಡ ವಿಷಕಾರಿ ಏಥೆನಾಲ್ ಗ್ಲೈಕಾಲ್ ಸೇರಿದ್ದ ಹಾಲು ಸೇವನೆ ಮಾಡಿದ್ದರಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಪ್ರಯೋಗಾಲಯದ ವರದಿಯಲ್ಲಿ ಕಂಡುಬಂದಿದೆ' ಎಂದು ಡಿಎಸ್ಪಿ ಜಿ.ದೇವಕುಮಾರ್ ತಿಳಿಸಿದ್ದಾರೆ.
ಕಾಕಿನಾಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಡಿ ಕೃಷ್ಣವೇಣಿ (76) ಅವರು ಫೆಬ್ರುವರಿ 22ರಂದು ಮೃತಪಟ್ಟ ಬಳಿಕ ಕಲಬೆರಕೆ ಹಾಲು ಪ್ರಕರಣ ಬೆಳಕಿಗೆ ಬಂದಿತ್ತು.
ಮೃತ ಮಹಿಳೆಯ ಮಗ ನೀಡಿದ ದೂರಿನ ಆಧಾರದಲ್ಲಿ ಬಿಎನ್ಎಸ್ಎಸ್ ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಡಿಯಲ್ಲಿ ಅಂಗಡಿ ಮಾಲೀಕ ಎ.ಗಣೇಶ್ವರರಾವ್ (33) ಎಂಬುವವರನ್ನು ಬಂಧಿಸಲಾಗಿದೆ.

