ಬದಿಯಡ್ಕ: ಮುಚ್ಚಿಲೋಟ್ ಕ್ರಿಕೆಟ್ ಲೀಗ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಜುನ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಾಣಿಯ ಗಾಣಿಗ ಸಮುದಾಯದವರಿಗಾಗಿ ಮುಚ್ಚಿಲೋಟ್ ಕ್ರಿಕೆಟ್ ಲೀಗ್ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ, ಮಹೇಶ್ ಅಡ್ಡ್ಕ ಅವರ ನೇತೃತ್ವದ ಅರ್ಜುನ್ ವಾರಿಯರ್ಸ್ ತಂಡವು ಸಾಮ್ರಾಟ್ ಮಾಂಬಾಡಿ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ವಿಶಿಷ್ಟ ವ್ಯಕ್ತಿಗಳು ಉಪಸ್ಥಿತರಿದ್ದರು.

.jpg)
