ಕಾಸರಗೋಡು: ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಸಾಮಾಜಿಕ ಸ್ವಾಸ್ಥ್ಯ ಹೆಚ್ಚಲು ಸಧ್ಯ ಎಂಬುದಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ತಿಳಿಸಿದ್ದಾರೆ. ಅವರು ಕಾಸರಗೋಡು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಮನ್ವಯ ಕಾಸರಗೋಡು ವತಿಯಿಂದ ನಡೆದ'ಕಾಸರಗೋಡು ಉತ್ಸವ-2026'ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮನ್ವಯದ ಪ್ರಧಾನ ಕಾರ್ಯದರ್ಶಿ ದಾಮೋದರ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹೋರಾಟಗಾರ, ಗಮಕ ಕಲಾಪರಿಷತ್ ಕೇರಳ ಘಟಕ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂತೋಷ್ ಬಮದ್ಯೋಡು, ಪ್ರಶಾಂತಿ ನೆಲ್ಲಿಕುಂಜೆ, ರಝಲಾ ಬೀವಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಬೀರಂತಬೈಲು ವಂದಿಸಿದರು.
ಸಮನ್ವಯ ವತಿಯಿಂದ 'ಕಾಸರಗೋಡು ಉತ್ಸವ-2026'-ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾರೋಪ
0
ಮಾರ್ಚ್ 02, 2026
Tags

